ಕನ್ನೆಂಜಲು
ಗಂಗೆಯೇ ನಿನ್ನಲ್ಲಿ ಕೂಡಾ ತಾರತಮ್ಯವೇ
ಆ ಪರಶಿವನ ಶಿರದಿಂದ ನೀ ಜಾರಿ ಬೀಳುವ
ಸಮಯದಲ್ಲಿ ಗಾಳಿ ನಿನಗೆ ದಾರಿ ನಿಡಲ್ಲವೆಂದು
ಅಡ್ಡಿ ಹಾಕಿತೇ...................
ನೀ ಬರುವ ರಭಸಕ್ಕೆ ಆಕಾಶ ತಾ ಚೂರಾಗುವ ಸಾಧ್ಯತೆ ಇದೆಯೆಂದು ತನ್ನೊಳಗೆ ನೀ ನಿಲ್ಲಲು
ಜಾಗ ಕೊಟ್ಟಿಲ್ಲವೇ.............
ಈಗ ನಿನ್ನಲ್ಲಿ ಏತಕೆ ಈ ಭೇದ-ಭಾವ
ಈ ಸೃಷ್ಟಿಯಲ್ಲಿರುವ ಜೀವಿಗಳೆಲ್ಲಾ
ನಿನಿಂದಲೇ ಬದುಕಿರುವರೆಂಬ ಸತ್ಯ ನಿನಗೆ ತಿಳಿದಿಲ್ಲವೇ......................
ಜಲಧಾರೆ ನೀನಿರುವ ಭುವಿಯಲ್ಲಾ
ಹಚ್ಚ ಹಸಿರು ತುಂಬಿ ತುಳುಕುವ
ಸಿರಿವನದ ಸೊಗಸಲ್ಲವೇ.....
ಒಂದು ಹನಿಯ ನೀರಿಲ್ಲದೆ ನಿನಗಾಗಿ
ಆ ಗಗನದ ಕಡೆಗೆ ಕೈಚಾಚಿ ನೋಡುತ್ತಿರುವ
ನಿಸ್ಸಹಾಯಕರಿಗಿಂದು ಜೀವವಾಗಿ ನೀ ಬಾರೆ
ಅವನಿಯ ಮಡಿಲಲ್ಲಿ ನೀ ಸೇರೇ.......
ಒಂದು ಹನಿಯ ನೀರು ಉಳಿಸಿ
ಆ ಹನಿಗಾಗಿ ಪರದಾಡೋ ಜೀವಕೆ
ಪ್ರಾಣ ದಾನ ಮಾಡಿ
- ಚುಕ್ಕಿ
24 Apr 2017, 05:39 pm
Download App from Playstore: