ಕನ್ನೆಂಜಲು

ಗಂಗೆಯೇ ನಿನ್ನಲ್ಲಿ ಕೂಡಾ ತಾರತಮ್ಯವೇ
ಆ ಪರಶಿವನ ಶಿರದಿಂದ ನೀ ಜಾರಿ ಬೀಳುವ
ಸಮಯದಲ್ಲಿ ಗಾಳಿ ನಿನಗೆ ದಾರಿ ನಿಡಲ್ಲವೆಂದು
ಅಡ್ಡಿ ಹಾಕಿತೇ...................

ನೀ ಬರುವ ರಭಸಕ್ಕೆ ಆಕಾಶ ತಾ ಚೂರಾಗುವ ಸಾಧ್ಯತೆ ಇದೆಯೆಂದು ತನ್ನೊಳಗೆ ನೀ ನಿಲ್ಲಲು
ಜಾಗ ಕೊಟ್ಟಿಲ್ಲವೇ.............

ಈಗ ನಿನ್ನಲ್ಲಿ ಏತಕೆ ಈ ಭೇದ-ಭಾವ
ಈ ಸೃಷ್ಟಿಯಲ್ಲಿರುವ ಜೀವಿಗಳೆಲ್ಲಾ
ನಿನಿಂದಲೇ ಬದುಕಿರುವರೆಂಬ ಸತ್ಯ ನಿನಗೆ ತಿಳಿದಿಲ್ಲವೇ......................

ಜಲಧಾರೆ ನೀನಿರುವ ಭುವಿಯಲ್ಲಾ
ಹಚ್ಚ ಹಸಿರು ತುಂಬಿ ತುಳುಕುವ
ಸಿರಿವನದ ಸೊಗಸಲ್ಲವೇ.....

ಒಂದು ಹನಿಯ ನೀರಿಲ್ಲದೆ ನಿನಗಾಗಿ
ಆ ಗಗನದ ಕಡೆಗೆ ಕೈಚಾಚಿ ನೋಡುತ್ತಿರುವ
ನಿಸ್ಸಹಾಯಕರಿಗಿಂದು ಜೀವವಾಗಿ ನೀ ಬಾರೆ
ಅವನಿಯ ಮಡಿಲಲ್ಲಿ ನೀ ಸೇರೇ.......

ಒಂದು ಹನಿಯ ನೀರು ಉಳಿಸಿ
ಆ ಹನಿಗಾಗಿ ಪರದಾಡೋ ಜೀವಕೆ
ಪ್ರಾಣ ದಾನ ಮಾಡಿ

- ಚುಕ್ಕಿ

24 Apr 2017, 05:39 pm
Download App from Playstore: