ಬಿಸಿಲ ನಾಡು
ಬಿಸಿಲಿನಂಚಿನ ಭಾಸ್ಕರ ಮಿತ್ರ
ವಿವಿಧ ಜನಾಂಗದ ಸಹಮತ ಸೂತ್ರ
ರಾಜಕೀಯವೋ? ಇಂದ್ರಜಾಲವೋ? ಸಂಗಮನಾಳಿದ ರಾಜತಂತ್ರವೋ?
ಅರಿಯದ ಯೋಜನೆ ಪ್ರತಿಫಲ ಸಜವೋ?
ದಾಹವಾಗಿದೆ....! ಸ್ಥಿತಿಯನು ನೋಡಿ
ಬಳ್ಳಾರಿ ಜನರ ಮತಿಯನು ನೋಡಿ!
ಇತಿಹಾಸ ಪುಟವ ಮೆಲ್ಲಗೆ ತೆರೆದಿರೆ
ಕಾನಿಷ್ಕ ದೊರೆಯು ಬಾಳಿದ ನೆರೆಹೊರೆ
ಸಂಪತ್ಭರಿತ ನಿಗೂಢ ಧನಸೆರೆ
ಗಣಿಧಣಿ ನಾಡಿನ ಸಂಗ್ರಾಮ ಮೆರೆದಿರೆ
ಕೃಷಿಯ ಮಕ್ಕಳಿರೊ ಅಧಿಕವು ಭೂಮಿ
ತುಂಗಭದ್ರೆಯು ನಮ್ಮಯ ತಾಯಿ
ಆದರೆ....
ಕೃತಕ ಫ್ಯಾಕ್ಟ್ರಿಯ ಅಟ್ಟಹಾಸದಿ
ಪರಿಸರ ಮಾತೆಯು ದುಃಖವು ಮರುಕದಿ
ಸರ್ವೋತ್ತಮವೂ ದುಡಿದಿರೆ ತವಕದಿ
- Dev
05 May 2017, 11:42 am
Download App from Playstore: