ರಣಹದ್ದುಗಳಿವು
ಸುಂದರ ಕನಸನ್ನು ಗುಯ್ಯ....
ಎನ್ನುತ್ತ ಆಳುಗೆಡಹುವ, ಸುಖ
ನಿದ್ದೆಗೆ ಭಂಗ ತರುವ ಸೊಳ್ಳೆಯ
ಹುಡುಕಿ- ಹುಡುಕಿ ಹೊಸಕಾಕುವ ನಾವು,ದಿನ- ನಿತ್ಯ ಕಿತ್ತು- ತಿನ್ನುವ
ಕ್ರೂರ- ಜಂತುಗಳನ್ನು ನಮ್ಮ ನೆತ್ತರ
ಬಸಿದು ರಕ್ಷಿಸುವ ನಾವೆಂತ ಮೂರ್ಖರು
ನಮ್ಮಿಂದಲೆ ಆರಿಸಿ
ನಮ್ಮನ್ನೆ ಆಳುವ ನಾಯಕರು
ನಮಗರಿವಿಲ್ಲದಯೇ
ನಮ್ಮ ದೋಚುತಿಹರು ನಮಿಸಿ
ರಕ್ಷಿಸುವರೆ ಭಕ್ಷಕರಾಗಿ
ರಕ್ಷಣೆಯೆ ಕನಸಾಗಿ
ಭೂಒಡಲ ಬಗೆದು
ಗರ್ಭವ ಸಿಗಿದು
ಬಂಜೆಯಾಗಿಸಿಹರಿಂದು
ನ್ಯಾಯದ ಅಲೆಯು
ಅನ್ಯಾಯದ ಸುಳಿಗೆ ಬಲಿಯಾಗಿ
ನ್ಯಾಯ ಸಾದಿಸಹೊರಟವರು
ರಾಜಕಾರಣಿಗಳ ಬಲೆಗೆ ಬಲಿಯಾಗಿ
ಮಾಡುವುದೇನೆಂದು? ಕೊರಗುತಿರುವರು ಮೂಖರಾಗಿ
ದನ- ಕಾಯುವವನಿಂದ
ದವಾಖಾನೆ ಕಾಯುವವನಿಗು
ತೆರಬೇಕು ಲಂಚ
ಕಸ- ಬಾಚುವವನಿಂದ
ದೇಶ ಆಳುವವನ ವರೆಗು
ಅಪೇಕ್ಷಿಸುವರು ಲಂಚ
ಲಂಚದ ಮೇಲೆ,ಹಾಸಿ ಮಂಚ
ಪೊಳ್ಳು ಬರವಸೆಗಳ ಬಲೆ ಬೀಸಿ
ಮುಗ್ದ ಜನರ ಮೂರ್ಖರಾಗಿಸಿ
ಮನಬಂದಂತೆ
ನೀತಿಸಂಹಿತೆಗಳ ರೂಪಿಸಿ
ಬಡವರ ರಕ್ತ-ಮಾಂಸವ
ಕಿತ್ತು ತಿನ್ನುತ್ತಿರುವರು ರಣಹದ್ದುಗಳಾಗಿ
ಇಂತಹ- ವುಗಳ ಅಂತ್ಯವ
ಕಾದು ಕುಂತಿರುವೆವು ಬಕಪಕ್ಷಿಗಳಾಗಿ
ಶಾರಧ
- ಶಕುಂತಲಾ
15 May 2017, 04:11 pm
Download App from Playstore: