ಹನಿಮುತ್ತು
ಗುರಿಯಿಟ್ಟು ಹೊಡೆದಳು
ಹೃದಯಕ್ಕೆ, ಗೋರಿ ಕಟ್ಟಿ
ಮೇಲೊಂದಿಷ್ಟು ಹೂವಿಟ್ಟಳು.
*
ನಿಯಮಾನುಸಾರ ಬದುಕು
ಸಾಗುತ್ತಲೇ ಇತ್ತು, ಗಡಿಯಾರವೇಕೋ
ಟೈಮ್ ಸೆನ್ಸ್ ಕಳೆದುಕೊಂಡಿತ್ತು.
*
ಜೀವನ ರಥಕೆ ಚಕ್ರಗಳ ಜೋಡಿಸಿ
ರೋಧಿಸಿದಳು,ಹಗ್ಗ ಹಿಡಿಯಲು
ನೂರು ಜನ ಸೇರಿ ಜಾತ್ರೆಯೇ ನೆರೆಯಿತು.
© ಚಂದ್ರಶೇಖರ ಮಾಡಲಗೇರಿ.
- ಚಂದ್ರಶೇಖರಮಾಡಲಗೇರಿ
17 May 2017, 08:13 am
Download App from Playstore: