ಮಳೆಯಾಗಿ ಬಾ..

ಅಂತರ್ಜಲವೂ
ಬತ್ತಿ ಹೋಯಿತು.
ಭಾವ ಭಿತ್ತಿಯಲಿ
ಉತ್ತಿ ಬಿತ್ತುವುದಕ್ಕೆ
ಅಡ್ಡಿಯಾಗಿದೆ ಬರಗಾಲ...!

ಈಗ ಕಣ್ಣೊಳಗೆ
ನೀರೂ ಇಲ್ಲ, ನೀನೂ ಇಲ್ಲ.
ಮಣ್ಣೊಳಗೆ ತೇವವಿಲ್ಲ
ನನ್ನೊಳಗೆ ಭಾವವಿಲ್ಲ...!

ಎದೆಯಂತೆ
ಭುವಿಯಾಗಿದೆ ಕಾಯ್ದ ತವೆ.
ಕಾಲಿಡದಿರು ಇಲ್ಲಿ,
ನಿನಗೆ ಕಾಲವೇ
ಉತ್ತರಿಸುವುದು ಅಲ್ಲಿ...!

ಬರುವುದಾದರೆ
ಮಳೆಯಾಗಿ ಬಾ ನೀನು,
ಸಾಕಿನ್ನು ವಿರಹ
ರಾಗ ದ್ವೇಷಗಳ ಮರೆತು
ಒಗ್ಗೂಡಲಿ ಭುವಿ ಭಾನು..!

- ಚಂದ್ರಶೇಖರ ಮಾಡಲಗೇರಿ.

- ಚಂದ್ರಶೇಖರಮಾಡಲಗೇರಿ

17 May 2017, 08:14 am
Download App from Playstore: