ಆಂತರ್ಯದ ಅಳಲು

ನಾನಾರೆಂದು ಎಲ್ಲರು ಬಲ್ಲರು
ಒಂದು ತುತ್ತು ನೀಡರು ಯಾರು?
ನನ್ನ ಬಡಕಲು ಕಾಯವ ನೋಡಿ
ಸುಂದರನಿರುವ ಇಲ್ಲಿ ಅದ ಒಡಿ
ಎಂದು ,ಬೆತ್ತದಿ ಬಡಿದು ತಗಳುವರು

ಬಡತನ- ಸಿರಿತನ ನರರನ್ನು ಭಕ್ಷಿಸುವ
ಭಕ್ಷಕನೆಂದು ಅರಿತಿದ್ದೆ ನಾ ಅಂದು
ಅದರ ಕೆನ್ನಾಲಿಗೆ ಆಕ್ರಮಿಸಿದೆ
ಸಕಲ ಜೀವರಾಶಿಗಳನು ಇಂದು

ಇರುಳೆಲ್ಲ ಕಾವಲುಗಾರನಾಗಿ
ಕಾಯುವೆ ನರರ ಮಾನ- ಪ್ರಾಣಗಳನು
ಅವರಾಕುವ ತುತ್ತು ಕೂಳಿಗೆ
ಜೀವಮಾನವೆಲ್ಲ ಋಣಿಯಾಗಿ

ನನ್ನ ಕಾಯವು ದುರ್ಬಲವಾದಾಗ
ನನ್ನ ಕಣ್ಣು ಮಂಜಾದಾಗ
ನನ್ನ ಅಂದವು ವಿರೂಪವಾದಾಗ
ಮಾನವೀಯತೆ, ಮರೆಯಾಗಿ ತಗಳುವರಾಗ....,,,,,,,!

ನಾನೊಂದು ಶ್ವಾನ
ನಿಯತ್ತೆ ನನ್ನ ಪ್ರಾಣ
ನಾನೆಂದು ಕೂಡಿಡುವುದಿಲ್ಲ
ವ್ಯಮೊಹವೆಂದು ನನಗಿಲ್ಲ
ಒಡೆಯನಿಗಾಗೆ ತನುವೆಲ್ಲ
ನೀ, ನಿಯತ್ತಾಗಿ ಬಾಳುವೆಯಲ್ಲ ?


ಶಾರಧ

- ಶಕುಂತಲಾ

21 May 2017, 11:43 am
Download App from Playstore: