ಸವಾಲುಗಳು ಎಂಬ ಬಲೆಯೊಳಗೆ
ಆವ ಶುಭಕಾರ್ಯವಿಹುದಿಂದು
ಇನಿತು ಹೂ ತಂದಿರುವಿರೆಂದು
ಸಂದೇಹದಿ ಇನಿಯನ ಕೇಳಲು
ಸನಿಹ ಬಂದ.... ಇನಿಯನು
ನಿನ್ನ ಮುತೈದೆಯಾಗಿ ನೋಡುವಾಸೆ
ಏಕೋ.... ಮೂಡಿದೆ ಮನಕಿಂದು
ಎಂದು ನೋವಿನಿಂದ ನುಡಿದನಂದು...
ಮಡದಿ- ಮಕ್ಕಳ ಕಡೆಗೆ
ಮಂದಹಾಸದಿ ಕೈ- ಬೀಸಿ
ನಡೆದನು ಗೆಳೆಯನ ಒಡಗೂಡಿ
ಮರಳಿ ಬಾರದ ಲೋಕಕ್ಕೆ
ಕಣ್ಣಿಗೆ ಕಾಣದ ಊರಿಗೆ
ನಂಬಿದವರ ಬಾಳಲ್ಲಿ
ಬಿರುಗಾಳಿ ಎಬ್ಬಿಸಿ......,,,,?
ಮನೆಯೆ ದೇವಾಲಯವೆಂದು
ಇನಿಯನೆ ದೇವರೆಂದು......
ಬಾಳು ಸಾಗಿಸಿದವಳಾಕೆ
ಲೋಕದ- ವ್ಯವಹಾರಕ್ಕೆ
ದೂರವಿದ್ದವಳಾಕೆ......?
ಬಂಧುಗಳಿಗೆಲ್ಲ ಬಾರವಾದಳು
ಇಳೆಯೊಳಗೆ ಒಬ್ಬೊಂಟಿಯಾದಳು
ಕರುಳ- ಬಳ್ಳಿಗೆ ನೆರಳಾಗಿ
ಬಾಳುವ ಛಲ ತೊಟ್ಟಳು
ಸವಾಲುಗಳ ಸಾಗರದಲ್ಲಿ
ಮುಳುಗಿ- ತೇಲುವದ
ಕರಗತ ಮಾಡಿಕೊಂಡು ಮನ್ನುಗ್ಗುತಿರುವಳು.......
ಮುಕ್ತಿಯ ಅರಸಿಕೊಂಡು......
ಶಾರಧ
- ಶಕುಂತಲಾ
27 May 2017, 12:02 pm
Download App from Playstore: