ಸತ್ತಾಗ ಅರಿತರು

ಕಷ್ಟದಲ್ಲಿರುವಾಗ ಬರಲಿಲ್ಲ ಯಾರೊಬ್ಬರು
ಸಹಾಯ ಮಾಡಲೆಂದು,
ಸುಖದಲ್ಲಿರುವಾಗ ಬಂದರು
ಸಂಬಂಧಿಕರ ಭೇಟಿಗೆಂದು.

ಬಿದ್ದಾಗ ಮೇಲೆತ್ತಲು ಬರಲಿಲ್ಲ
ಯಾರೊಬ್ಬರ ಕೈ ಅಂದು,
ಗೆದ್ದಾಗ ಮುಗಿಬಿದ್ದರು
ಮೆರವಣಿಗೆ ಮಾಡಲೆಂದು.

ಅತ್ತಾಗ ಬರಲಿಲ್ಲ ಯಾವ ಕೈಗಳು
ಕಣ್ಣೀರ ಒರೆಸಲೆಂದು,
ಸತ್ತಾಗ ಅರಿತರು ಕಳೆದುಕೊಂಡದ್ದು
ಕಣ್ಣೀರೊರೆಸುವ ಕೈ ಎಂದು.

- ಅಕ್ಷತ

04 Jun 2017, 03:21 pm
Download App from Playstore: