ಗುಬ್ಬಿ ಗೂಡಿನ ಕತೆ

ಹಳ್ಳಿಯೊಂದರ ಬೇಲಿ ಗಿಡದ
ಪುಟ್ಟ ಗುಬ್ಬಿ ಮರಿ ನೀನಂದು
ದೆಲ್ಲಿ ಸದನದ ಗದ್ದಿಗೆ ಏರಿ
ಇಂದು ಜಗಕೆ ತೋರಿದೆ ನೀನಾರೆಂದು!

ತಾಯಿಯ ಉಸಿರಿಗೆ ಹೆಸರಾಗಿ
ತಾತನ ಹೆಸರನ್ನು ಹಸಿರಾಗಿಸಲು
ಪಣತೊಟ್ಟು,ಜವರಾಯನಿಗೆ
ಎದುರಾಗಿ,ಈಜಿ ದಡ ಸೇರಿದೆ!

ಕಲ್ಲು- ಮುಳ್ಳುಗಳನೆ ಮೆಟ್ಟಿ ನಡೆದೆ
ಸೋಲು- ಅಪಮಾನಗಳನೆ
ಮೆಟ್ಟಿಲು ಮಾಡಿಕೊಂಡು ಬೆಳೆದೆ
ನೀ- ಒಪ್ಪಿ ಅಪ್ಪಿಕೊಂಡವರೆ
ನಿನ್ನ ಕೊರಳಿಗೆ ಉರುಳಾದರು,
ಬದುಕೊಂದು ಬಿಸಿ ತುಪ್ಪವಾಯಿತು!

ಸಾಗರದಾಚೆಗು ಹರಡಿದೆ ಇಂದು
ನಿನ್ನ ವಿಜಯದ ಕಹಳೆಯು
ಊರೂರು ಅಲೆದೆ ನೀ- ಅಂದು
ಜೀವನ ನಡೆಸಲು, ಸಾಧನೆಯ ಬಿಸಿಲುಗುದುರೆ ಏರಿ!

ಜನಕನೆ ತಲೆಹಿಡುಕನಾಗಿ
ಇನಿಯನೆ ಅಸುರನಾಗಿ
ಮಡಿಲ ಸೇರಿದ ಹಸುಗೂಸಿಗಾಗಿ
ಅಲೆಯುವಾಗ,ನೀ ಕಾಣಲಿಲ್ಲ
ಈ ಜಗಕೆ!
ಉತ್ತಮೋತ್ತಮ ಪುರಸ್ಕಾರಗಳು
ನಿನ್ನ ನಾಮವನ್ನಲಂಕರಿಸುತ್ತ
ಬಾಗಿಲ ಬಳಿಗೆ ಬರಲು
ನಿನಗಾಗಿ ಬರುವರು ಹಿಡಿದು
ವಿಜಯ ಪತಾಕೆ!

ಜೀವನವೆಂಬ ಸಾಗರದಲ್ಲಿ
ಸಮಸ್ಯೆಗಳೆಂಬ ಅಲೆಗಳಲ್ಲಿ
ಬಂದಿಯಾಗದೆ,ಸೀಳಿ
ಮುನ್ನಡೆದೆ ವಿಮುಖಳಾಗದೆ
ಸಮಸ್ಯೆಗೆ ಹೆದರಿ,ಸಾವಿಗೆ
ಶರಣಾಗುವ ಮಹಿಳೆಯರಿಗೆ
ನೀನಾದೆ ಮಾದರಿ ಮಹಿಳಾಮಣಿ!
ಈ- ನಾಡೆಂದು ನಿನಗೆ ಚಿರ- ಋಣಿ!


ಶಾರಧ

- ಶಕುಂತಲಾ

04 Jun 2017, 05:14 pm
Download App from Playstore: