ನಿಸರ್ಗದ ಮಹಿಮೆ

ಸಾಗರವನ್ನೆ ಬರಿದು ಮಾಡಿದರು
ಭೂ- ತಾಯಿಯ ತಣಿಸಲಾರ
ಆಗಸದಿಂದ ಮಳೆ- ಹನಿ
ಧರೆಯ ತಾಗದ ಹೊರತು

ಮಳೆಯ ಸ್ಪರ್ಶದಿ ಇಳೆಯು
ತಾನಾಗುವಳು ಮದುವಣಗಿತ್ತಿ
ಕೊಚ್ಚೆಯಲ್ಲ ಕೊಚ್ಚಿಹೋಗಿ
ಹರಡುವುದು ಮಕರಂದ ಎಲ್ಲೆಲ್ಲಿಯು

ತಳಿರ ತೋರಣಗಳಿಂದ ಸಿಂಗಾರಗೊಂಡು,ಕಂಗೊಳಿಸುವೆ
ಕಾನನದ ಅದಿದೇವತೆಯಾಗಿ
ನರನು,ನಾಶಮಾಡದಿದ್ದರೆ
ಅವನ ಉಸಿರಿಗೆ ನೀ- ಹಸಿರಾಗಿ

ನೀ- ಹೊರತು, ನಾವಿಲ್ಲ
ಅರಿತಿರುವಿರಿ ಎಲ್ಲ
ಆಚರಣೆಯಲ್ಲೆ ಮುಗಿವುದೆಲ್ಲ
ಯಾರು ಅದ ಪಾಲಿಸುವುದಿಲ್ಲ

ಘೋಷಣೆಯ ಬಿಡಿ
ಕಾಯಕವ ಮಾಡಿ
ನಿಸರ್ಗವ ಉಳಿಸಿ!
ದೇಶವ ಉಳಿಸಿ!


ಶಾರಧ
( ಪರಿಸರ ದಿನಾಚರಣೆಯ ಶುಭಾಶಯಗಳು)

- ಶಕುಂತಲಾ

06 Jun 2017, 02:27 pm
Download App from Playstore: