ನಿಸರ್ಗದ ಮಹಿಮೆ
ಸಾಗರವನ್ನೆ ಬರಿದು ಮಾಡಿದರು
ಭೂ- ತಾಯಿಯ ತಣಿಸಲಾರ
ಆಗಸದಿಂದ ಮಳೆ- ಹನಿ
ಧರೆಯ ತಾಗದ ಹೊರತು
ಮಳೆಯ ಸ್ಪರ್ಶದಿ ಇಳೆಯು
ತಾನಾಗುವಳು ಮದುವಣಗಿತ್ತಿ
ಕೊಚ್ಚೆಯಲ್ಲ ಕೊಚ್ಚಿಹೋಗಿ
ಹರಡುವುದು ಮಕರಂದ ಎಲ್ಲೆಲ್ಲಿಯು
ತಳಿರ ತೋರಣಗಳಿಂದ ಸಿಂಗಾರಗೊಂಡು,ಕಂಗೊಳಿಸುವೆ
ಕಾನನದ ಅದಿದೇವತೆಯಾಗಿ
ನರನು,ನಾಶಮಾಡದಿದ್ದರೆ
ಅವನ ಉಸಿರಿಗೆ ನೀ- ಹಸಿರಾಗಿ
ನೀ- ಹೊರತು, ನಾವಿಲ್ಲ
ಅರಿತಿರುವಿರಿ ಎಲ್ಲ
ಆಚರಣೆಯಲ್ಲೆ ಮುಗಿವುದೆಲ್ಲ
ಯಾರು ಅದ ಪಾಲಿಸುವುದಿಲ್ಲ
ಘೋಷಣೆಯ ಬಿಡಿ
ಕಾಯಕವ ಮಾಡಿ
ನಿಸರ್ಗವ ಉಳಿಸಿ!
ದೇಶವ ಉಳಿಸಿ!
ಶಾರಧ
( ಪರಿಸರ ದಿನಾಚರಣೆಯ ಶುಭಾಶಯಗಳು)
- ಶಕುಂತಲಾ
06 Jun 2017, 02:27 pm
Download App from Playstore: