ತಳಮಳ
ನೂರು ದೆವರುಗಳನ್ನು
ನೂರು ಬಾರಿ ಮನದಲ್ಲಿ ನೆನೆದು
ವೀರ- ಶೌರ್ಯ ರಸಗಳನ್ನು
ಕರಗತ ಮಾಡಿಕೊಂಡು
ಹೇಡಿ ತನವ ದೂರವಿರಿಸಿ
ಎಲ್ಲರ ಮೆಚ್ಚುಗೆ ಗಳಿಸಲು
ಎಲ್ಲರನ್ನು ಏಕಾಗ್ರತೆಯಲ್ಲಿ
ಬಂದಿಸುವ ಪಣ ತೊಟ್ಟು
ತರಗತಿಗೆ ತೆರಳಿದೆನು..........
ಅರಿಯದ ಮಾರ್ಗಗಳಿಂದ
ತೂರಿ- ಹಾರಿ ಬಂದು ನನಗು
ಮುನ್ನವೇ ತರಗತಿಯಲ್ಲಿ ತನ್ನ
ಪ್ರಭಾವವ ತೋರಿಸುತ್ತ
ನೀ ಎಷ್ಟೇ- ದೈವಗಳ ಬೇಡಿದರು,
ಎಷ್ಟೇ- ರಸಗಳ ಮೈಗೂಡಿಸಿಕೊಂಡರು
ನನ್ನಿಂದ ನೀ ದೂರಾಗಲು ಸಾಧ್ಯವೇ
ಅಯ್ಯೊ- ಮೂರ್ಖಳೆ!
ನಾನು ಎಲ್ಲರಲ್ಲು ಇರುತ್ತೇನೆ ತಿಳಿ!
ಎಂದಿತು ತಲೆಯ ಮೊಟಕುತ........
ನಾನು ನಡುಗುತ್ತ...,,,,
ನಡುಕ ನನ್ನಲ್ಲಿ ಒಂದಾಗುತ್ತ....,,,,
ಒಂದೆ ನಾಣ್ಯದ ಎರಡು
ಮುಖಗಳು ಎಂಬಂತೆ
ಮುಗಿಯಿತು ಅಂದಿನ ತರಗತಿ ...
ಕೊನೆಗು ತರಾತುರಿಯಲ್ಲಿ....
ಶಾರಧ
- ಶಕುಂತಲಾ
09 Jun 2017, 04:38 pm
Download App from Playstore: