ಬಾರಯ್ಯ ಮಳೆರಾಯ

( ಬಾರಯ್ಯ ಮಳೆರಾಯ )

ಬರಗಾಲದ ಬೇಸಿಗೆಯ ಧಗೆಯಲ್ಲಿ.
ಬರಿದಾಗಿರುವ ಬಂಜರು‌ ಭೂಮಿಯಲ್ಲಿ
ಕುಡಿಯಲು ನೀರಿಲ್ಲ. ತಿನ್ನಲು ಗಂಜಿಗೂ ಗತಿಯಿಲ್ಲ.
ಕಾಡ್ಗಿಚ್ಚಿಗೆ ಬಲಿಯಾಗುತ್ತಿವೆ ಇ ಕಾಡೆಲ್ಲ.
ತಿನ್ನಲು ಅಹಾರವಿಲ್ಲದೆ ಕೊನೆಯುಸಿರನು ಎಳೆಯುತ್ತಿವೆ ಪ್ರಾಣಿಗಳೆಲ್ಲ .

ಎಲ್ಲಿರುವೆಯೊ ಮಳೆರಾಯ ಭೊರ್ಗರೆಯುತ ಭಾರಯ್ಯ .
ಇ ಭೂಮಿಯು ಮಸಣವಾಗುವ ಮುನ್ನ ಮಳೆಯಾಗಿ ಧರೆಗಿಳಿದು
ಹಸಿರೆಂಬ ಉಸಿರನ್ನು ಧರೆಯಲ್ಲಿ ನೀ ಚೆಲ್ಲಿ ಜಗವನ್ನು ಕಲ್ಪವ್ರುಕ್ಷವಾಗಿ ಪರಿವರ್ತಿಸಲು ಭಾರಯ್ಯ
ಉಯ್ಯೊ ಉಯ್ಯೊ ಮಳೆರಾಯ...

( ಸಂತೋಷ್ // ಜೀತು )

- ಸಂತೋಷ್//ಜೀತು

12 Jun 2017, 10:16 am
Download App from Playstore: