"ಕನ್ನಡ ಕಸ್ತೂರಿಯಲ್ಲವೆ"
ಕನ್ನಡ ಈ ನೆಲ
ನೆಲದ ಗಮಲಿನಂತೆ ಅರಳಿದೆ
ವರ್ಣ ಮಾಲೆ ಹೂವಿನಂತೆ
ಉದುರುತ್ತಿದೆ ನೆಲದಮೇಲೆ
ಸಾಹಿತ್ಯ ನೆಲದ ಒಳಗಿನ ಬೇರು
ಕಾವ್ಯ ಹಳೆ ಬೇರಿನ ಹೂಸ ಚಿಗುರು
ಕವಿತೆ ಕೊಂಬೆಯಂತೆ ಅರಳಿ
ಭಾವಗಳು ಎಲೆಯಂತೆ ಚಿಗುರಿ ನಂತಿದೆ
ಅಲ್ಲಲ್ಲಿ ಈ ಕವಿಗಳೆಂಬ ಪಕ್ಷಿಗಳು
ಕವನವೆಂಬ ಗೂಡುಕಟ್ಟಿ ಕೂಗುತ್ತಿವೆ
ಕಾವ್ಯಪ್ರೆಮಿಗಳು ಈ ಮರದ ಕೆಳಗೆ
ಕುಳಿತು "ಕನ್ನಡ ಕಸ್ತೂರಿಯಲ್ಲವೆ"ಎನ್ನುತ್ತಿದ್ದಾರೆ
- ಹೇಮಚಂದ್ರ
15 Jun 2017, 02:52 pm
Download App from Playstore: