ನನ್ನ ಮರಣ

ಮರಣದ ಬಾಗಿಲ
ತೆರೆದು ಹೋದವರು
ಇದುವರೆಗೂ ಮರಳಿ
ಬರಲಿಲ್ಲವೆಂದರೇ
ಮರಣದಲ್ಲೇನೋ
ಸ್ವಾದವಿರಬಹುದು !!!!!

ಸಾವನ್ನಪ್ಪಿದವರು
ಭೂಮಿಯಲ್ಲಿ
ಮಾಡಿದ
ತನ್ನ ಪಾಪ ಪುಣ್ಯಗಳ
ಲೆಕ್ಕವನ್ನೊಪ್ಪಿಸಿ
ಫಲಿತಾಂಶಕ್ಕಾಗಿ
ಕಾಯುತ್ತಿರಬಹುದೇನೋ ???
ಉನ್ನತ ಸ್ಥಾನಮಾನ
ಗಳಿಸುವ ಆಸೆಯಿಂದ..

ಇರಬಹುದು..!!!
ಇಲ್ಲದಿದ್ದರೇ
ಒಬ್ಬರಾದರೂ
ಮರಳಿ ಬರಬಹುದಿತ್ತು ....

ದೇವನ ಸನ್ನಿಧಿಗೆ
ತೆರಳುವವರಿಗೊಂದು
ಪಿಳ್ಳೆ ನೆಪಗಳು....
ಅಪಘಾತ, ಕೊಲೆ
ಆತ್ಮಹತ್ಯೆ, ಕಾಯಿಲೆ..

ಮತ್ತೆಂದು ಮರಳಿ
ಬಾರಾದ ಯಾತ್ರೆಯ ಕರೆ
ಬಂದಾಗ ಯಾರಿಗೂ
ತಿಳಿಸದೇ ಧಿಡೀರ್
ಹೊರಟುಬಿಡುತ್ತಾರೆ ....

ನೀವೆಲ್ಲರೂ ನನ್ನ
ಹಾದಿಯಲ್ಲೇ
ಬರಲಿದ್ದೀರಿ
ಎಂಬ ಎಚ್ಚರಿಕೆಯ
ಸಂದೇಶವ ಕೊಟ್ಟು ...

ಯಾತ್ರೆಗೊಂಡವರ
ಹಾದಿಯಲ್ಲಿ ಸಾಗಿ
ಮರಣದ ರುಚಿಯನ್ನು
ಪ್ರತಿಯೊಬ್ಬರೂ
ಅನುಭವಿಸಲಿಕ್ಕಿದೆ...

ಆಹಾ...
ನನ್ನ ಮರಣ
ನನ್ನ ಕಣ್ಣ ಮುಂದಿದೆ
ಅಂತಿಮ ಯಾತ್ರೆಯ
ಸರ್ವ ಸಿದ್ಧತೆ
ಮಾಡಿಕೊಳ್ಳಬೇಕಾಗಿದೆ...

- ಅಲ್ತಾಫ್ ಬಿಳಗುಳ

22 Jun 2017, 12:10 am
Download App from Playstore: