ಪಯಣದ ಹಾದಿಯಲ್ಲಿ......

ನಾವು ನಡೆವ ಹಾದಿಯಲ್ಲಿ
ಹಲವು ಅನುಭವಗಳ ಜೊತೆಯಲ್ಲಿ
ಒಳಿತು- ಕೆಡುಕುಗಳ ಸಂಗಮದಲ್ಲಿ
ಬೆಳೆವೆವು ತಿರುವುಗಳ ಬಂಧನದಲ್ಲಿ!

ಕನಸುಗಳ ಬತ್ತಿ ಹೊಸೆದು
ಕಷ್ಟಗಳ ತೈಲ ಸುರಿದು
ವಿಜಯದ ಜ್ಯೋತಿ ಬೆಳಗಿಸೆಂದು
ಹರಸುವರು ನಮ್ಮ ಪಡೆದವರು!

ಸಮಾಜದ ಎಡರು- ತೊಡರು
ಹಾದಿಯಲ್ಲಿ,ಕೆಡುಕು- ಒಳಿತುಗಳ
ಮೋಡಿನಲ್ಲಿ ,ತಿದ್ದಿ- ತೀಡುತ
ಬೆಳೆಸುವ ಜಾದೂಗಾರರು
ಅವರೆ ಶಿಕ್ಷಕರು.........

ಉತ್ತಮೋತ್ತಮ ಸ್ಥಾನವನ್ನ
ಅಲಂಕರಿಸಿದರು......
ಸಾಧಾರಣ- ಅಸಾಧಾರಣ
ಸಾಧನೆಯ ಬೆನ್ನೆಲುಬು
ನಮ್ಮ ಶಿಕ್ಷಕರು......

ವೃತ್ತಿ ಜೀವನದ ಪಯಣದಲ್ಲಿ
ಬಂದು- ಹೋಗುವ ಮಾರ್ಗದಲ್ಲಿ
ಬೆರೆವರು ಶಿಕ್ಷಕ ನೌಕೆಯಲ್ಲಿ
ಉಳಿವರು ಎಲ್ಲರ ಮನದಲ್ಲಿ....

ಗುರುವಿನ ಗುಲಾಮನಾಗುವ
ತನಕ ದೊರೆಯದಣ್ಣ ಮುಕುತಿ!
ಪ್ರತ್ಯಕ್ಷ-ಪರೊಕ್ಷ ಗುರುಗಳಿಗೆಲ್ಲ
ಇದೋ... ನನ್ನ ನಮನ...


ಶಾರಧ

- ಶಕುಂತಲಾ

25 Jun 2017, 03:50 pm
Download App from Playstore: