ಕಾಣದೆ ನಿನಗೆ ಕಣ್ಣೀರು...

ದೇವರೆ... ನೀನೆಷ್ಟು ಸ್ವಾರ್ಥಿ
ಕೆಲವರಿಗೆ ತಿನ್ನಲು ಗಂಜಿ ಇಲ್ಲ
ನೀನು ತಿನ್ನದೇ ಇದ್ದರೂ
ಮೃಷ್ಟಾನ್ನ ಭೋಜನ ನೈವೇದ್ಯ

ಮನೆ ಮನೆಗೆ ಹೋಗಿ ಅಮ್ಮ ಹಸಿವು
ಎಂದರೂ ಹಿಡಿ ಅನ್ನ ಕೊಡದವರು
ನಿನ್ನ ಮೈಯಿಗೆ ಪಂಚಾಮೃತ
ಸುರಿಯುತ್ತಿರುವರಲ್ಲ

ಕಷ್ಟ ಪಟ್ಟು ಸಾಲ ಮಾಡಿ ಬೀಜ ಗೊಬ್ಬರ
ತಂದು ಹಗಲು ಇರುಳೆನ್ನದೆ
ಉಳುಮೆ ಮಾಡಿ ಬಿತ್ತಿರಲು
ಬಾರದೆ ಹೊಗುವನು ಜವರಾಯ

ಅಷ್ಟು ಇಷ್ಟು ಮಳೆ ಬರಲು
ಸೊಗಸಾಗಿ ಬೆಳೆ ಬರಲು
ಹಬ್ಬದ ಸಡಗರ ರೈತನ ಮೊಗದಲಿ
ಸುಗ್ಗಿಯು ಬಂದಿತು ಹಿಗ್ಗನು ತಂದಿತು
ಎಲ್ಲೆಲ್ಲೂ ರಾಶಿ ಕಣ್ಮನ ತುಂಬಿಹುದು

ಕುಷಿಯಲಿ ಹೇಳಿದನು ಮಗಳಿಗೆ
ಪೇಟೆಗೆ ಹೋಗುವೆನು ಬೆಳೆ ಮಾರಿದ
ದುಡ್ಡಲಿ ತರುವೆನು ಬೆಳ್ಳಿಯ ಗೆಜ್ಜೆ
ಬಣ್ಣದ ಅಂಗಿ ಹೋಗಿ ಬರುವೆ ನನ್ನ ಕಂದ

ಪೇಟೆಯ ತಲುಪಲು ಕತ್ತಲಾಗಲು
ಸುತ್ತಲೂ ಮೋಡ ಕವಿದಿರಲು
ಎತ್ತ ನೋಡಿದರು ನಿಲ್ಲಲು ಜಾಗವಿಲ್ಲ
ದೋ ಎಂದು ಸುರಿಯುತ್ತಿರಲು ಮಳೆ
ಬೆಳೆದ ಬೆಳೆಯಲ್ಲ ನೀರು ಪಾಲು

ದೇವರೆ ನೀನೆಷ್ಟು ಕ್ರೂರಿ....

- chinmayi

27 Jun 2017, 02:42 pm
Download App from Playstore: