ಅದೃಷ್ಟವೋ..... ಹಣೆಬರಹವೋ......

ಅಪ್ಪ ಕೊಟ್ಟ ಆಭರಣವ
ಗಂಡ ದುಡಿದು ಕೂಡಿಟ್ಟ ಹಣವ
ಮುರುಕಲು ಕಪಾಟಿನಲ್ಲಿಟ್ಟು
ತೆರಳಿದೆವು,ಕದ ತೆರೆದಿಟ್ಟು

ಸಜೀವಗಳನ್ನೆ- ನಿರ್ಜೀವಗಳಾಗಿಸಿ
ದೋಚುವರು ಜಗವ ಮರುಳಾಗಿಸಿ
ಕಬ್ಬಿಣದ ಸರಪಳಿಯಿಂದ ಬಂದಿಸಿದ್ದರು.........
ಬಿಡಿಸಿ ಜಾಣ್ಮೆಯಿಂದ
ನಿನ್ನ ಪಡೆವರು.........

ನಾ ತೆರೆದಿಟ್ಟ ಕದವ ನೆನೆದು
ಮನವು ಆತಂಕದಲ್ಲಿ ಓಲಾಡಿತು
ಉಸಿರ ಬಿಗಿಹಿಡಿದು
ನೂರು ದೇವರ ಮನದಲ್ಲಿ ನೆನೆದು
ಓಡಿಬಂದೆವು.......

ಅದೃಷ್ಟವೋ- ಹಣೆಬರಹವೋ
ಇದ್ದದ್ದು ಇದ್ದಂತೆ ಇತ್ತು
ಹೊದ ಜೀವ ಮರಳಿತು
ನಮ್ಮ ಪುಣ್ಯವೋ....
ದೇವರ ವರವೋ.....

ಅಂತು ಸುಖಾಂತವು
ನಮ್ಮ ದುಗುಡವು

ಶಾರಧ

- ಶಕುಂತಲಾ

02 Jul 2017, 05:21 pm
Download App from Playstore: