ಒಲವಿನ ಒರತೆ..
ತಿರುಗೋ
ಈ ಭೂಮಿಯಲ್ಲಿ
ಬೊಗಸೆ ಪ್ರೀತಿಗಾಗಿ
ಅಲೆಮಾರಿಯಂತೆ
ಅಲೆದಾಡುತ್ತಿರುವ
ನನಗೆ..ನೀ ಬಂದೆ
ಚೈತ್ರ ಮಾಸದಿ
ಎಲೆಯುದುರಿ
ಹೊಸ ಚಿಗುರ
ಪಡೆದ ಮರದಂತೆ...
ಬಳಲಿ ಬಸವಳಿದ
ಈ ಹೃದಯಕ್ಕೆ
ನೀ ಬಂದೆ..
ಮರುಭೂಮಿಯಲ್ಲಿ
ತಿಳಿ ನೀರಿನ
ಒರತೆಯಂತೆ..
ಒಲವಿನಾ ಕೊರತೆಯ
ನೀಗಿಸಲು..
ವರುಷದಿ
ಹರುಷವನೆಲ್ಲಾವಾ ಕಂಡು..
ಹುಸಿ ಮುನಿಸುಗಳ
ತಾಪದಿ ಬೆಂದು....
ಒಡಲಾಲದಲ್ಲಿ
ನಾ ಬಲು ಮೊಹಗೊಂಡು..
ನಾನಾದೇ ಗೆಳತಿ
ಕಾಮನ ಬಿಲ್ಲಿಗಿಂತಾ ಬೆಂಡು...
ಸವಿದೆವು ಬೇವು-ಬೆಲ್ಲವನೆಲ್ಲವಾ
ಹರುಷದಿ-ಹೊಸ-ವರುಷದಿ..
ಪ್ರೇಮ-ಪಲ್ಲವಿ ನೀನಾಗಿ
ಚರಣ ನಾನಾಗಿ...
ಭಂದಿಯಾದೆವು
ಪ್ರೇಮ-ಬಂಧನದಲಿ...
ಹಿಂದಿನ ಚೈತ್ರ ಮಾಸದಿ
ಮರದ ರೆಂಬೆ-ಕೊಂಬೆಗಳಲ್ಲಿ
ಹೊಸ ಚಿಗುರಿನಿಂದ
ನಳ-ನಳಿಸಿದ
ಈ ಪ್ರೀತಿಯೆಂಬ
ಮರಕ್ಕೆ..ಇಂದಿನ
ಚೈತ್ರ ಮಾಸಕೂ
ಮುನ್ನವೇ
ಈ ಪ್ರೀತಿಯೆಂಬ ಮರದ
ರೆಂಬೆ-ಕೊಂಬೆಗಳಲ್ಲಿ
ಎಲೆಯುದುರುತ್ತಿರುವ ಅನುಭವ..
ಇದು ಚೈತ್ರ ಮಾಸಕೂ ಮುನ್ನವೇ
ನಡೆಯುವ ಸಹಜ ಪ್ರಕ್ರಿಯೆಯೂ...?
ಅಥವಾ ಈ ಪ್ರೀತಿಯೆಂಬ ಮರ
ಬರಡಾಗುತ್ತಿರುವ
ವಿನಾಶದ ಸೂಚನೆಯೂ...?
ಉತ್ತರವ ನೀನೇ ಹೇಳು ಗೆಳತಿ..
ಪ್ರೀತಿಯಿಂದ..
ವಿಜಯಾನಂದ..
9741940305
- ವಿಜಯಾನಂದ
09 Jul 2017, 06:07 pm
Download App from Playstore: