ಮನುಕುಲವ ಉಳಿಸಿ....

ಮಚ್ಚು ಕುಡುಗೋಲ ಬಳಸಿ
ರುಂಡ ಮುಂಡಗಳ‌ ಕತ್ತರಿಸಿ
ಹಸಿರ ನೆಲದಲಿ‌ ನೆತ್ತರ ಹರಿಸಿ
ಏತಕೆ ‌ನಗುವಿರಿ‌ ಗಹಗಹಿಸಿ

ಎದೆಯೊಳಗಿನ ಮಾನವನ ದಹಿಸಿ
ಮನುಜನ ದೇಹದೊಳಗೆ ರಾಕ್ಷಸನ ಆಹ್ವಾನಿಸಿ
ಲೋಭ ಮದ ಮತ್ಸರ ದ್ವೇಷಗಳ ಅವನೊಳಗೆ ತುಂಬಿಸಿ
ಸಾಧಿಸುವುದೇನಿದೆ ಮನಸ ಕಲಕಿ‌ ಕಣ್ಣೀರ ತರಿಸಿ

ನೊಂದವರು‌ ಬದುಕುವರು‌ ಅನುದಿನ ಕಾಡಿದವರ ಶಪಿಸಿ
ಕಣ್ಣೀರಿನ ಹೊಳೆಯನೆ ನೋವಿನ ಮೌನದಲಿ ‌ಹರಿಸಿ
ಆ ಶಾಪವು ಕಾಡಿದವರ ಮತ್ತೆ ಕೊಲ್ಲದೆ ಕಾಡಿಸಿ
ನೋವುಂಡವರ ನೋವು ಸಿಗುವುದಿಲ್ಲವೆ ಕಾಡಿದವರಿಗೆ ಪುನರ್ವರ್ತಿಸಿ

ಕೊಲ್ಲಿ ಮನಸೊಳಗಿನ ಮದ ಮತ್ಸರಗಳಿಗೆ ಗುಂಡ ಹಾರಿಸಿ
ದ್ವೇಷ ಸ್ವಾರ್ಥ ಮೋಹಗಳ ಮನಸಿಂದ ಸರಿಸಿ‌
ಎಲ್ಲರಿಗೂ ಪ್ರೀತಿ ಪ್ರೇಮ ನಗು ಸಹಬಾಳ್ವೆಯ ಪಸರಿಸಿ
ಈ ಮನುಕುಲವ ರಕ್ಕಸ ಭಾವಕ್ಕೆ ಬಲಿಕೊಡದೆ ಉಳಿಸಿ

- ಶ್ರೀಕಾವ್ಯ

14 Jul 2017, 08:27 pm
Download App from Playstore: