ಆಲೋಚನೆ

ರೂಪಿಸಿ ನನ್ನ ಕನಸಲಿ ನಿನಗಿದೆ ಶಾಮಿಲು,,
ನಿನ್ನ ನೆನಪೇ ಸಾಕು ಬೇಕಿಲ್ಲ ಬೇರೆ ಅಮಲು,,

ಕನಸಿನ ಅಂಗಳದಲ್ಲಿ ನಾ ಹಾಕಿರುವೆ ಚಿತ್ತಾರದ ರಂಗವಲ್ಲಿ,,,
ಮಧುರ ಅಧರ ನಿನ್ನ ತುಟಿಗಳಿಂದ ನೀ ಹಾಕು ನನಗೆ ಬೇಲಿ,,,

ನನ್ನ ತುಂಟ ಯೋಜನೆಗಳಿಗೆ ನೀ ಹಾಕು ರುಜುವಾತು,,
ಬಲು ಹಿತವು ಗೆಳತಿ ನಿನ್ನ ಮಾತು,,
ನಿನ್ನ ಪ್ರೀತಿ ದೊರೆತ ನಾನೊಬ್ಬ ದೊರೆ
ತೋಳ ತೆಕ್ಕೆಯಲಿ ನಿನಾಗು ಸೆರೆ,,
ನೀನೇ ನನ್ನ ಅದೃಷ್ಟ ದೇವತೆ
ಸುಪ್ರಭಾತ ಎಂದು ತಿಳಿದು
ಇಗೋ ನಾ ಬರೆದೆ ಕವಿತೆ

- pavan

14 Jul 2017, 08:53 pm
Download App from Playstore: