ಹಗಲುವೇಷ

ಸಿರಿವಂತಿಕೆಯ ಬಡಿವಾರ ತುಂಬಿರಲು ಮನಕೆ
ಕಾಣದು ಬಡತನದ ವೇದನೆಯು ಕಣ್ಣಿಗೆ

ಆಡಂಬರದ ಜೀವನ ಬರಿ ಕ್ಷಣಗಳ ಎಣಿಕೆ
ಆಗಸದೆತ್ತರಕೆ ಹಾಕುವ ಕನಸುಗಳ ಹೆಣಿಕೆ

ದುಡ್ಡಿನ ದರ್ಪದ ಪೊರೆ ಕಣ್ಣ ಮೇಲಿರಲು
ಪ್ರೀತಿ ಅಕ್ಕರೆಯ ಸಿಹಿಯ ಸವಿಯದು ಮನವು

ಕ್ಷಣ ಸನಿಹ ನೀರ ಮೇಲಿನ ಗುಳ್ಳೆ ಮಾಯವಾಗಲು
ಬೇಡುವುದು ಮನಸು ಬರಿ ಆಸೆಗಳ ಹವಣಿಕೆಯ

ಸಂಪದವ ಗಳಿಸಿ ಸಾಹುಕಾರರಾದರೇನು
ತೂರಿದರು ಸಂಬಂಧಗಳ ಬಿರುಗಾಳಿಯ ಒಡಲಿಗೆ

ಎಲ್ಲವನು ಗೆಲ್ಲಲು ಬೇಕಿಲ್ಲ ಈ ಹಗಲುವೇಷ
ಸಾಕು ಪ್ರೀತಿಯ ನಡೆ ನುಡಿಯ ನಾಲ್ಕು ಮಾತು ಜೀವಕೆ ....

- Irayya Mathad

16 Jul 2017, 04:17 pm
Download App from Playstore: