ಅವಿಶ್ರಾಂತ
ಅನುದಿನವು- ಅನುಕ್ಷಣವು
ಅವಿಶ್ರಾಂತ ಜೀವಿಗಳು ನಾವು
ಗಳಿಕೆಯೆಡೆಗೆ ನಮ್ಮ ಗಮನವು
ಸಂಬಂಧಗಳ ಸವಿಯ ಮರೆತಿರುವೆವು
ಮುಂಜಾನೆ ರವಿ ರಶ್ಮಿಯ
ಸವಿಯಲು ಸಮಯವಿಲ್ಲ
ಸಾಲು-ಸಾಲು ಸಾಗುವ ಬಾನಾಡಿಯ
ಸುಮಧುರ ಗಾನವ ಆಲಿಸಿಲ್ಲ
ನಿಸರ್ಗದ ಅರಿವು ನಮಗಿಲ್ಲ
ತರು-ಲತೆಗಳ ಚುಂಬನದ ಸವಿಯಿಲ್ಲ
ಸಿದ್ದ ವಸ್ತುಗಳೆ ಬಾಳಲ್ಲೆಲ್ಲ
ಮಾತೃ ವಾತ್ಸಲ್ಯವು ಕನಸಾಯಿತಲ್ಲ
ವಿದೇಶಿಯರ ಮೋಡಿಗೆ
ಮರುಳಾದೆವು
ಮಾತೃಭಾಷೆಯ ಪಾಲಿಗೆ
ನಾವೆ ಉರುಳಾದೆವು
ಆಂಗ್ಲಭಾಷೆಗೆ ಅಡಿಯಾಳಾದೆವು
ಆತ್ಮಸಾಕ್ಷಿಯ ಹಂತಕರು ನಾವು
ಜಪಿಸುವರು ಉದ್ದಾರದ ಮಂತ್ರ
ಅದು ಆಂಗ್ಲ ಭಾಷೆಯಿಂದ ಮಾತ್ರ
ಕನ್ನಡಾಂಬೆಯ ಮಡಿಲಲ್ಲಿ
ಕನ್ನಡವು ಸೊರಗಿಹುದು
ಪರಕೀಯತೆಯು ಪೌರುಷದಲಿ
ಆಡಂಬರದಿ ಮೆರೆಯುತಿಹುದು
ಭಾರತಾಂಬೆಗೆ ಜೈಕಾರ
ಕನ್ನಡಾಂಬೆಗೆ ಜೈಕಾರ
ಪರಕೀಯತೆಗೆ ಇರಲಿ
ನಮ್ಮ ದಿಕ್ಕಾರ.........
- ಶಕುಂತಲಾ
20 Jul 2017, 01:03 pm
Download App from Playstore: