ಆಶ್ರಯ
ಅಲೆದು-ಅಲೆದು
ದಣಿದಿರುವೆ ನಾನು
ಆಶ್ರಯ ನೀಡಿ
ಆದರಿಸುವೆಯ ನೀನು!
ಕಾರಿರುಳು ಕವಿದಿರಲು
ಬಾಳಲ್ಲಿ
ಬೆಳ್ಕಿಂಡಿಯೊಂದು ಕಾಣಲು
ಎದುರಲ್ಲಿ!
ನೂರಾರು ಕಲ್ಪನೆಯು
ಮೂಡಲು ಮನದಲ್ಲಿ
ಕಣ್ಣಿಗೆ ಕಂಡದ್ದು ಕೈಗೆಟುಕದೆ
ಕಣ್ಮರೆಯಾಗುತಿಹುದು ನೋಡಿಲ್ಲಿ!
ಪ್ರಯತ್ನಕ್ಕೆ-ಫಲವಿಲ್ಲದಾಗ
ಪೂಜಾರಿಯ ಮೊರೆಹೋಗುವರಲ್ಲ
ದೋಷಗಳ ಸುರಿಮಳೆ ಸುರಿಸುವರಾಗ
ಪರಿಹಾರಕ್ಕಾಗಿ ಹಣ ತೆರಬೇಕಲ್ಲ!
ಬಯಸಿದ್ದೆಲ್ಲ ಬಳಿಬಂದರೆ
ನಿನ್ನ ನಂಬುವರೆಲ್ಲ
ಬಾಳಲ್ಲಿ ವಿಘ್ನಗಳೆದುರಾದರೆ
ಆರವರ ಬುಟ್ಟಿಗೆ ಬೀಳುವರೆಲ್ಲ!
ಸಹನೆಯಿಂದ ಕಾಯೋಣ.......
ಉತ್ತಮ ಫಲವ ಕಾಣೋಣ.....
ಶಾರಧ
- ಶಕುಂತಲಾ
21 Jul 2017, 01:18 pm
Download App from Playstore: