ಆಶ್ರಯ

ಅಲೆದು-ಅಲೆದು
ದಣಿದಿರುವೆ ನಾನು
ಆಶ್ರಯ ನೀಡಿ
ಆದರಿಸುವೆಯ ನೀನು!

ಕಾರಿರುಳು ಕವಿದಿರಲು
ಬಾಳಲ್ಲಿ
ಬೆಳ್ಕಿಂಡಿಯೊಂದು ಕಾಣಲು
ಎದುರಲ್ಲಿ!

ನೂರಾರು ಕಲ್ಪನೆಯು
ಮೂಡಲು ಮನದಲ್ಲಿ
ಕಣ್ಣಿಗೆ ಕಂಡದ್ದು ಕೈಗೆಟುಕದೆ
ಕಣ್ಮರೆಯಾಗುತಿಹುದು ನೋಡಿಲ್ಲಿ!

ಪ್ರಯತ್ನಕ್ಕೆ-ಫಲವಿಲ್ಲದಾಗ
ಪೂಜಾರಿಯ ಮೊರೆಹೋಗುವರಲ್ಲ
ದೋಷಗಳ ಸುರಿಮಳೆ ಸುರಿಸುವರಾಗ
ಪರಿಹಾರಕ್ಕಾಗಿ ಹಣ ತೆರಬೇಕಲ್ಲ!

ಬಯಸಿದ್ದೆಲ್ಲ ಬಳಿಬಂದರೆ
ನಿನ್ನ ನಂಬುವರೆಲ್ಲ
ಬಾಳಲ್ಲಿ ವಿಘ್ನಗಳೆದುರಾದರೆ
ಆರವರ ಬುಟ್ಟಿಗೆ ಬೀಳುವರೆಲ್ಲ!

ಸಹನೆಯಿಂದ ಕಾಯೋಣ.......
ಉತ್ತಮ ಫಲವ ಕಾಣೋಣ.....


ಶಾರಧ

- ಶಕುಂತಲಾ

21 Jul 2017, 01:18 pm
Download App from Playstore: