ಅಗಲಿಕೆ
ಮುಗ್ದ ಹೇಂಟೆಯು
ಮುದ್ದಿನಿಂದ ಮೊಟ್ಟೆಯಿಟ್ಟು
ಮರಿಯ ಮಾಡಿತು,ನೂರು ಕಾಲ ಬಾಳಿರಿ ನರರ ದೃಷ್ಟಿ ತಾಗದೆ
ಎಂದಿತು ಉಸಿರಕೊಟ್ಟು
ಕರುಳ ಕುಡಿಗಳ
ಜೋಪಾನ ಮಾಡಿತು
ಹದ್ದು-ಕಾಗೆಯ ಕಂಗಳ
ಮರೆಮಾಚಿ ನಾಯಿ- ನರಿಗಳ
ಸನಿಹದಿಂದ ದೂರವಿರಿಸಿ
ಕಿತ್ತು ತಿನ್ನುವ ಒಡೆಯನಿಹನು
ಪಕ್ಕದಲ್ಲೆ,ಎಂಬುದ ಮರೆತು
ಮುದ್ದಿನಿಂದ ತುತ್ತುನೀಡಿತು
ಹರುಷದಲಿ ,
ದಷ್ಟಪುಷ್ಟವಾಗಿ ಬೆಳೆದಿದ್ದ
ಕೋಳಿ ಎಡೆಗೆ ಗಮನವರಿಯಿತು
ತಾಯಿ-ಮಕ್ಕಳ ಅಗಲಿಕೆಗೆ
ಮುನ್ನುಗ್ಗಿದ ಹುರುಪಿನಲಿ
ನೀ ಉಂಡದ್ದು ಉಳಿಯುವುದು
ಕ್ಷಣಕಾಲ
ನಾನಿದ್ದರೆ ಸಂಬಂದ ಉಳಿವುದು
ಅನುಗಾಲ
ಯೋಚಿಸಿ ನೋಡು
ಬಾಳಲು ಬಿಡು!
ಶಾರಧ
- ಶಕುಂತಲಾ
26 Jul 2017, 06:47 pm
Download App from Playstore: