ಋಣ
ಅನ್ನದ ಋಣವ
ಬಲ್ಲವರಾರು
ಹುಡುಕುತ ಬರುವುದು
ಬೇಡವೆಂದರು
ಕನಸಿನ ಕೋಟೆ
ಕರಗಿದರೇನು
ತಾಳ್ಮೆಯ ಜ್ಯೋತಿ
ಬೆಳಗದೇನು
ಅರಸಿ ಬಂದಾಗ
ದೂರ ಸರಿದೆ
ನಿಟ್ಟುಸಿರು ಬಿಟ್ಟಾಗ
ನೀನೆ ಬಳಿ ಬಂದೆ
ನಾ ಬಯಸಿದಂತೆ
ನಡೆಯದೇನು
ನಡೆಯುವುದೆಲ್ಲ ನಿನ್ನ ಲೀಲೆಯಲ್ಲವೇನು
ನಾ ನಿನ್ನ ಮಗಳಲ್ಲವೇನು!
ನನ್ನ ಏಳಿಗೆ ನಿನ್ನ ಹೊಣೆಯಲ್ಲವೇನು!
ಕೈ ಹಿಡಿದು ಕಾಯವ್ವ ನೀನು!
ಸದಾಕಾಲ ನಿನ್ನ ಸೇವಕಳು ನಾನು!
ಶಾರಧ
- ಶಕುಂತಲಾ
28 Jul 2017, 10:10 pm
Download App from Playstore: