ಬರಗಾಲ
ಎಲ್ಲೆಲ್ಲೂ ಹರಡಿದೆಯೋ
ಬರಗಾಲ
ನಮಗೆ ಇನ್ನೆಲ್ಲಿದೆಯೋ
ಉಳಿಗಾಲ
ತಿನ್ನಲು ಮೇವಿಲ್ಲ
ದಾಹ ನೀಗಲು ಜಲವಿಲ್ಲ
ಮಳೆಯು ಮರೀಚಿಕೆಯಾಯಿತಲ್ಲ
ನರರಿಂದ ನಮಗೆ ಉಳಿಗಾಲವಿಲ್ಲ
ಸಹಪಾಠಿಗಳೆಲ್ಲ ಖಸಾಯಿಖಾನೆ
ಸೇರುತಿರುವರಲ್ಲ
ನಮ್ಮ ಈ ಯಾತನೆ
ಆಲಿಸುವರಾರು ಇಲ್ಲ
ದೇವ ನೀ ದಯೆತೋರೆಯ
ಬಡ ಜೀವವ ಉಳಿಸೆಯ
ಶಾರಧ
- ಶಕುಂತಲಾ
29 Jul 2017, 12:52 pm
Download App from Playstore: