ಬರಗಾಲ

ಎಲ್ಲೆಲ್ಲೂ ಹರಡಿದೆಯೋ
ಬರಗಾಲ
ನಮಗೆ ಇನ್ನೆಲ್ಲಿದೆಯೋ
ಉಳಿಗಾಲ

ತಿನ್ನಲು ಮೇವಿಲ್ಲ
ದಾಹ ನೀಗಲು ಜಲವಿಲ್ಲ
ಮಳೆಯು ಮರೀಚಿಕೆಯಾಯಿತಲ್ಲ
ನರರಿಂದ ನಮಗೆ ಉಳಿಗಾಲವಿಲ್ಲ

ಸಹಪಾಠಿಗಳೆಲ್ಲ ಖಸಾಯಿಖಾನೆ
ಸೇರುತಿರುವರಲ್ಲ
ನಮ್ಮ ಈ ಯಾತನೆ
ಆಲಿಸುವರಾರು ಇಲ್ಲ

ದೇವ ನೀ ದಯೆತೋರೆಯ
ಬಡ ಜೀವವ ಉಳಿಸೆಯ


ಶಾರಧ

- ಶಕುಂತಲಾ

29 Jul 2017, 12:52 pm
Download App from Playstore: