ಬರಡು ಭೂಮಿ
ನಾ ನಡೆವ ಹಾದಿಯಲ್ಲಿ
ಸ್ವಾಗತಿಸಲು ಹಚ್ಚಹಸುರಿಲ್ಲ
ಮಳೆಹನಿಗಳಲಿ ಮಿಂದೆದ್ದ
ಮಣ್ಣಿನ ಕಂಪಿಲ್ಲ
ಯಾರ ಶಾಪವೊ ತಿಳಿತಿಲ್ಲ
ಹುಡುಕುತ ಹೊರಟೆ ಮೂಲ
ಹರಡಿದೆ ನಮ್ಮದೆ ಜಾಲ!
ಅಪೌಷ್ಟಿಕತೆಗೆ ಆಸರೆಯಾಗಿ
ಪತನಗೊಂಡ ಪರ್ಣಗಳ
ಮೂಕವೀಕ್ಷಕನಂತೆ ನಿಂತಿವೆ
ತರು-ಲತೆಗಳು ಬೆತ್ತಲೆಯಾಗಿ
ಸಿಂಗರಿಸು ಬಾ ಮಳೆರಾಯ
ಆಗದಿರು ಇಳೆಗೆ ಜವರಾಯ!
ಶಾರಧ
- ಶಕುಂತಲಾ
06 Aug 2017, 07:58 am
Download App from Playstore: