ಅವಳಿಗಾಗಿ ಬಯಸಿದೆ

ಚಂದಿರನ ಊರಿನಲ್ಲಿ
ಚಂದನದ ಗೊಂಬೆಯು!!
ಹುಣ್ಣಿಮೆಯ ರಾತ್ರಿಯಲ್ಲಿ
ಬೆಳದಿಂಗಳ ತಂದಳು!!

ನನ್ನ ಎದೆಯ ಬಾಗಿಲನ್ನು
ಬಡಿಯುತಲಿ ನಿಂತಳು!!
ನಾ ನೋಡುತ ಬೆರಗಾದೆ
ತೆರೆಯದೇ ಬಾಗಿಲು!!

ಅವಳ ಕಣ್ಣ ಸವಿ ನುಡಿಗಳ
ಪರಿ ತಿಳಿಯದೇ ಹೋದೆನು!!
ಮನಸಿಗೆ ಬೀಗ ಜಡಿದು
ಮೌನವಾಗಿ ಕುಳಿತೆನು!!

ಕಾದು ಕಾದು ಸಾಕಾಗಿ
ಅವಳು ತಿರುಗಿ ಹೋದಳು!!
ಎಚ್ಚೆತ್ತ ಮನಸು ಈಗ
ಹೋದವಳಿಗಾಗಿ ಬಯಸಿದೆ!!

- ಪಿ.ಜಿ.ಜ್ಯೋತಿ

09 Aug 2017, 05:30 pm
Download App from Playstore: