ಮಾನವತಾವಾದಿ

ಸಾವಿರ ಶತಮಾನಗಳ ಹಿಂದೆ....

ದಿಗಂಬರನಾಗಿ ಹುಟ್ಟಿದ ಕಂದ
ತಾಯಿಯ ಶಾಂತಿ ಮೊಲೆಯುಂಡು ಬೆಳೆದ
ತಂದೆಯ ಅಕ್ಕರೆ -ಸಕ್ಕರೆ ಮಾತು ಕೇಳಿದ
ಶಿಕ್ಷಣದ ಶಿಕ್ಷೆ ಪಡೆದ ಶಿಖರದಂತೆ ಬೆಳದು ಬಂದ

ಭಾರತ ತಾಯಿಯನ್ನು ಸುಂದರವಾಗಿ ಗೀಚಿದ
ವರ್ಣನೆಯನ್ನು ಸುರುಳಿಯಾಕಾರದಲ್ಲಿ ಬರೆದ
ಓದುಗರ - ಕೇಳಗರ- ಒಪ್ಪಿದರು ಪ್ರಶಂಸೆ ಪಡೆದ
ಸಣ್ಣ ದೊಡ್ಡ ಮಾತುಗಳನ್ನು ದೂರ ತಳ್ಳಿದ

ದೀನ - ದಲಿತರಿಗೆ ಸ್ವ ಸಹಾಯ ಮಾಡಿದ
ಜಾತಿ - ಧರ್ಮವನ್ನು ದೂರಗಟ್ಟಿದ
ವಿಜ್ಞಾನವನ್ನು ಎಲ್ಲರಲ್ಲೂ ಹುಡುಕಿದ
ಮಾನವತೆ ನಡತೆಯಲ್ಲಿ ನೆಡೆದ

ಸೂರ್ಯ ಮುಳುಗಡೆಯ ಕಡೆಗೆ ಸಾಗಿದ
ಜಾತಿ - ಅಧರ್ಮ-ಅನೀತಿ ನೋಡಿ ಕಣ್ಣೀರು ಹಾಕಿದ
ಮಾನವರ ದೌರ್ಜನ್ಯ ನೋಡಿದ
ಹೃದಯ ಕಂಪನ ನಿಲ್ಲಿಸಿದ

ಇವನೇ ನಮ್ಮ ಆರಾಧ್ಯ ದೈವನಾದ
ಈ ದೇಶವನ್ನು ಬದಲಿಸಿದ ಪುಣ್ಯತ್ಮಾನಾದ
ಅವರೇ ನಮ್ಮ ಹೃದಯಕ್ಕೆ ಹತ್ತಿರನಾದ
ನಿತ್ಯವೂ ಆಲಿಸೋಣ ಅಣಿಮುತ್ತುನಾದ

- Shinan

10 Aug 2017, 10:59 am
Download App from Playstore: