ಭರತ
ಭರತನೆ ನೀನು ಮರೆತೆಯಾ ನಿನ್ನನೆ?
ಮುಸುಕಿನ ಭ್ರಮೆಯಲಿ ಮರೆತೆಯಾ ನಿನ್ನನೆ?
ವೀರರ ಶೂರರ ಗತವೂ ನಿನ್ನದು
ರಾಮ ಕೃಷ್ಣರ ವಂಶವು ನಿನ್ನದು
ಶಕ್ತಿಯ ಯುಕ್ತಿಯ ಪುತ್ರನು ನೀನು
ರಾಣಾ ಶಿವಾಜಿಯ ವಂಶಜ ನೀನು !೧!
ಚಾಣಕ್ಯನ ಚಾಣಾಕ್ಷತನವೂ ನೀನೆ
ಆರ್ಯಭಟನ ಜ್ಞಾನವೂ ನೀನೆ
ಸ್ವಾಮಿ ವಿವೇಕರ ಅಧ್ಯಾತ್ಮವು ನೀನೆ
ಶಂಕರ ಮಧ್ವರ ಆತ್ಮವು ನೀನೆ !೨!
ಬಸವರ-ಅಕ್ಕನ ವಚನಾಮೃತ ನೀನು
ಪುರಂದರ ಕನಕರ ಗಾನಾಮೃತ ನೀನು
ಭೀಮರಾವರ ಭವಿಷ್ಯವು ನೀನು
ರಾಮನ್ನರು ಕಂಡ ಬೆಳಕಿನ ಕೀರಣವು ನೀನೆ !೩!
ಬುದ್ಧನ ಶಾಂತಿಯ ತತ್ವವು ನೀನೆ
ತತ್ವವ ಪೂಜಿಪ ಭಕ್ತನು ನೀನೆ
ಸಮಾಜದಿ ಬರುವ ಮಹಿಷಾಸುರರಿಗೆ,
ದುರ್ಗಾಮಾತೆಯ ಕ್ರೋಧವು ನೀನೆ !೪!
- Sindhur
19 Aug 2017, 07:41 am
Download App from Playstore: