ಮರುಕಳಿಸಿದ ವೇದನೆ

ಮಳೆರಾಯ ಇಳೆಗೆ
ಜಾರಿದಾಗ
ಕಂಬನಿಯು ಕೆನ್ನೆಗೆ
ತಾಗಿತಾಗ
ಅಗಲಿದ ಇನಿಯನ
ನೆನಪಾಯಿತಾಗ
ಮನೆಯ ಮಾಲಿಕನು
ಮನೆಯ ತೊರೆ ಎಂದಾಗ


ಹಸುಗೂಸುಗಳ ಅಂಗೈಯಲ್ಲಿಟ್ಟು
ದೂರಾದೆ ನೀ ನನ್ನ ಬಿಟ್ಟು
ನಿನ್ನ-ನನ್ನವರು ನೆರವಾಗಿ
ವರವಾಗಲಿಲ್ಲ ನನ್ನಬಾಳಿಗೆ
ಆಸರೆಯಾದವರಿಗೆ
ನಾನೇನೆನ್ನಲಿ ಅವರ ಮಾತಿಗೆ
ಕಂಬನಿದಾರೆಯ ಕೊಡವದೆ
ನಡೆದೆನು ಬೀರುತ
ಬಲವಂತದ ಹುಸಿನಗೆ



ಶಾರಧ

- ಶಕುಂತಲಾ

21 Aug 2017, 01:55 pm
Download App from Playstore: