ನೆಲೆ ನಿರ್ಧಾರ

ಜವಾಬ್ದರಿ ತಗೊಳೋ ಕಾಲ
ಏನು ಇದು ಯೋಚನೆಯ ಜಾಲ?
ಕ್ಷಣಕ್ಷಣಕ್ಕೂ ಬೇರೆ ಬೇರೆ ಉಕ್ಕುವುದು ಜಲ
ಯಾವುದು ಸರಿ ಎಂಬುವುದೇ ಕೋಲಾಹಲ

ಎತ್ತಂದರತ್ತ ಪರಿಶ್ರಮದ ಪಾಲ
ಎಲ್ಲೂ ಇಲ್ಲಾ ಆರಾಮದ ಗೋಕುಲ
ಬೀತ್ತಿದರೆ ಫಲ ಕೊಡುವುದು ಹೊಲ
ಆಗದೆಂದು ಹಿಂದೆ ಸರಿದರೆ ಎಲ್ಲ ಕಲ್ಲಿನ ನೆಲ

ನೆಲೆ ಇಲ್ಲೆಂದರೆ ಎಲ್ಲೆಲ್ಲು ಕೆಟ್ಟ ಫಲ
ಇದ್ದರೆ ಎರೆಯುವರು ಹಾಲ
ಜೀವನ ಹೋರಾಟಕೆ ಅಸ್ತಿತ್ವವೇ ಮೂಲ
ಓದಿ ಅರಿಯಬಹುದು ಇತಿಹಾಸಕಥೆಗಳ ಸಾಲ

ಯಾರ ಮಾರ್ಗ ಯಾರಿಗೂ ತಿಳಿಯದ ಇಂದ್ರಜಾಲ
ನಮಗೆ ಬಂದಂತೆ ಬಾರಿಸುವುದೇ ಜೀವನ ರೂಲ
ಅದಕ್ಕಾಗಿ ಅಂಜದೆ ಅಳಕದೆ ನಿಲ್ಲಬೇಕು ಅಚಲ
ಪಡೆಯಬೇಕು ಹಿರೇಉಳ್ಳಿಗೇರಿ ಕರೆಮ್ಮಳ ಆಶೀರ್ವಾದದ ಗುರುಬಲ

- MB

22 Aug 2017, 04:55 pm
Download App from Playstore: