ಮೂಡನಂಬಿಕೆಯ ಸುಳಿಯಲ್ಲಿ.
ನಂಬಿಕೆ ಇರ್ಬೇಕು ನಿಜ......
ಮೂಡನಂಬಿಕೆಯಲ್ಲ
ಅಂದೊಂದಿತ್ತು ಕಾಲ .....
ಏನು ಅರಿಯದ ಚಿಕ್ಕವಯಸ್ಸಿಗೆ ಕಂಕಣ
ಅಂದು ಹೆಣ್ಣು ಅನುಭವಿಸಿದ್ದಳು
ಚಿಕ್ಕ ವಯಸ್ಸಿಗೆ ತಾಯ್ತನದ.. ನೋವನ್ನ
ಪತಿ ಮರಣಿಸಿದರೆ ಪತ್ನಿಯು
ಅರ್ಪಿಸಬೇಕು ಅವನ ಚಿತೆಗೆ ತನ್ನ ಪ್ರಾಣವನ್ನ
ಸತಿಸಹಗಮನ ಅನ್ನೋ ಮೂಡನಂಬಿಕೆಗೆ
ಬಲಿ ಕೊಟ್ಟಿದ್ದರು ಅಲವಾರು ಹೆಣ್ಮೆಕ್ಳನ್ನ
ಹೆಣ್ಮಕ್ಕಳು ತಿಳಿಸಬೇಕು ಇದರ ನಿಷೇಧಕ್ಕೆ ನಿಂತ ಲಾರ್ಡ್ ವಿಲಿಯಮ್ ಬೆಂಟಿಂಗ್ ರಾಜ ರಾಮ್ ಮೋಹನ ರಾಯ... ನಂತವರಿಗೆ ಕೃತಜ್ಞತೆಗಳನ್ನ
ಅಂದು ಹೆಣ್ಮಕ್ಕಳು ಹೊಸಿಲು ದಾಟುವಂತಿರಲಿಲ್ಲ
ಇಂದು ಅವರೇ ಹೊರಗೆ ದುಡಿದು ಸಾಕುತ್ತಿದ್ದಾರೆ
ಗಂಡು ದಿಕ್ಕಿಲ್ಲದ ಸಂಸಾರವನ್ನ
ವಿವಾಹನಿಂತ ಪತಿ ಸತ್ತ ಮಹಿಳೆಯರನ್ನ
ದೇವದಾಶಿಯನ್ನಾಗಿಸಿ ತಳ್ಳುತ್ತಿದ್ದರು
ವೇಶ್ಯಾವಾಟಿಕೆ ಅನ್ನೋ ಆಳ ಪ್ರಪಾತಕ್ಕೆ
ಹಣ್ಣುಮಳನ್ನ
ಅರಸನಾದವನಿಗೆ ಅರವತ್ತು ಮಂದಿ ಹೆಂಡರು
ಎನ್ನುವ ಗಾದೆಯ ಹಾಗೆ ಈ ಸಮಾಜಮಾರ್ಪಟ್ಟಿದೆ
ಬಹು ಪತ್ನಿತ್ವ ಅನ್ನೋ ಮೂಢನಂಬಿಕೆಯಾಗಿ
ಇಂದಿಗೂ ಇದು ನಿಂತಿಲ್ಲ.....
ಇದನ್ನೆಲ್ಲ ಎದುರಿಸಿ ಮೆಟ್ಟಿ ನಿಂತವರೆಲ್ಲರಿಗೂ
ಸಿಗಬೇಕು .....ಒಂದು ಸನ್ಮಾನ
ಮಂಜು
- ಮಂಜು
05 Sep 2017, 12:12 pm
Download App from Playstore: