ಅವನು ಭಯ ಪಟ್ಟರೆ .......

ತನ್ನವರೆಲ್ಲರನ್ನ ಬಿಟ್ಟು
ದೇಶಕ್ಕಾಗಿ ಗಡಿಯಲ್ಲಿ ನಿಂತು
ತನ್ನ ಸುಖದುಃಖಗಳನ್ನೆಲ್ಲ ಮರೆತು
ದೇಶದ ರಕ್ಷಣೆಗಾಗಿ ದುಡಿವನು
ಹಗಲಿರುಳು................
ಪ್ರಚಂಡ ಹಿಮದ ಚಳಿಗೆ ಭಯಪಡದೆ
ಸವಾಲೆಸೆದು.......
ಬಿಸಿಲು ಮಳೆಗೆ ಬಯಾರಿ ಬೆಂದು ಬಳಲಿ
ನಮ್ಮೆಲ್ಲರಿಗಾಗಿ.......
ಅವನು ನೆಮ್ಮದಿಯಿಂದ ನಿದ್ರಿಸದೆ
ನಮ್ಮನ್ನೆಲ್ಲ ನೆಮ್ಮದಿಂದ ನಿದ್ರಿಸುವಂತೆ ಮಾಡಿ

ಗುಂಡು ಸಿದಿಮದ್ದುಗಳಿಗೆ ಭಯಪಡದೆ
ಹೆದೆಯೊಡ್ಡಿ ನಿಂತು............
ಕೆಟ್ಟ ಶತ್ರುಗಳ ಕಪಟಕ್ಕೆ ಭಯಪಡದೆ
ಅವರನ್ನು ಸದೆ ಬಡಿಯುತ್ತಾ

ನಮ್ಮೆಲ್ಲರ ರಕ್ಷಣೆಗೆ ನಿಂತ ಯೋಧ
ಭಯಪಡುವುದುಂಟೆ.............



ಮಂಜು

- ಮಂಜು

06 Sep 2017, 12:22 pm
Download App from Playstore: