ಬಲಿ(ಗೌರಿ ಲಂಕೇಶರ ಹತ್ಯೆ) ಖಂಡಿಸಿ.
ಓ ಸದ್ಗುರುವೇ
ನೀನು ಹೇಳಿದ್ದು ಪುಣ್ಯಕೋಟಿಯ ಹಾಡು
ಪಾಪಿಗಳ ಪ್ರಾಯಶ್ಚಿತ್ತ
ಭಂಡರು,ಪುಂಡರು,ಪ್ರಚಂಡರು
ಬೈರಾಗಿಗಳಾಗುವ ಮಾತು.
ಬೌಧ್ದಿಕ ವಿವೇಚನಾರಹಿತ
ಭಂಡರು,ಸೋಗಲಾಡಿಗಳಿಗೆ
ಕಿವಿ ಹಿಂಡುವರಾರು?
ಓ ಸದ್ಗುರುವೇ
ನೀನು ಕಲಿಸಿದ್ದು ಮೌನ,ಧ್ಯಾನ
,ಪ್ರಾರ್ಥನೆಯಂತಹ ಚಿಂತನೆ
ಜಗದ ಜನರ ಕೊಲ್ಲುವ ಪರಿಪಾಠ
ಹನುಮನ ಬಾಲದಂತೆ ಬಳೆಯುತ್ತಿದೆ
ಸಮುದಾಯದಲ್ಲಿ!
ಎದೆಹಾಲು ನೀಡಿದ ತಾಯಿಯೇ
ಕತ್ತು ಹಿಸುಕಿ ಕೊಂದು ಸಾಯಿಸುವಂತೆ.
ಕಾರ್ಕೋಟಕ ವಿಷ ಸರ್ಪಕ್ಕೂ
ಕರುಣೆ,ಅಂತಃಕರಣ ಇದೆ.
ಒಣ ಮಾತು ಹೇಳುವ ಮನಜರಲ್ಲಿ
ಮಮಕಾರದ ಮಾತು ಇನ್ನೆಲ್ಲಿ?
ಓ ಸದ್ಗುರುವೇ
ಮಾರುಕಟ್ಟೆಯಲ್ಲಿ ಈಗ ಸಾಲು
ಸಾಲಾದ ಕೊಲೆಗಳು
ಕೊಂಡು ಕೊಳ್ಳುವವರೆಲ್ಲರು ಬಕಾಸುರರು
ಸಮಾಜ ತಿದ್ದುವ ಸೋಗಲಾಡಿಗಳು
ಮಂಚದ ಮೇಲೆ ಮಲಗಿದ್ದಾರೆ
ಕಾಣುವ ಬ್ರಿಟಿಷರರನ್ನು ಕೊಂದ ಚಿತ್ರಪಟ
ನೇತುಹಾಕಿದ್ದಾರೆ ಅದಕ್ಕೆ
ಬಹಳ ಬೆಲೆ ಕಡಿಮೆ.
ಕಾಣದ ಬ್ರಿಟಿಷರನ್ನು ಹುಡುಕಿ ಕೊಡಲು
ತುಂಬಾ ಬೆಲೆಯುಳ್ಳ
ಜಾಹೀರಾತು ಹೆಚ್ಚಾಗಿ ಮಾರಟವಾಗುತ್ತಿದೆ.
ಯಾವುದನ್ನು ಖರೀದಿಸಲಿ.
ಓ ಸದ್ಗುರುವೇ
ನೀನು ಕಲಿಸಿದ ಪದ್ಯ ಅರ್ಥವಾಗುತ್ತಿಲ್ಲ
ಹಸಿದ ಹೆಬ್ಬುಲಿಯೊಂದು
ಹುಸಿಯಾಗಿ ನುಡಿಯದ ತಾಯಿ ಹೃದಯದ
ಗೋವಿನ ಹಾಡು.
ಹಿಂಸಿಸದೆ,ಜರಿಯದೆ, ಹರಿದು ತಿನ್ನದೆ ,ಹವಣಿಸುತ್ತಿತ್ತು
ಹೊಂಚು ಹಾಕಿ ತಿನ್ನದೆಯೇ
ಹಸಿವೆಯಿಂದ ಬಳಲುತ್ತಿತ್ತು.
'ಸತ್ಯಂ ವದ ದರ್ಮಂ ಚರ'ಎಂದು
ಹಸಿದ ಹುಲಿ ಹಾರಿ ನೆಗೆಯಿತು.
ಆದರೆ
ಇಂದೇಕೆ ಬಲಯಾದಳು ಆ ಗೌರಿ.?
ಓ ಸದ್ಗುರುವೇ
ಹುಟ್ಟು ಆಕಸ್ಮಿಕ ಸಾವು ಸಹಜ
ಇದು ನೀನು ಕಲಿಸಿದ ದಿವ್ಯಪಾಠ
ಮಣ್ಣಲ್ಲಿ ಮಣ್ಣಾಗಿ ಹೋಯಿತಲ್ಲ.
ಹೋದವರೆಲ್ಲರೂ
ಹಾರಾಡಿ ,ತೂರಾಡಿ ,ರಕ್ತ ಚಲ್ಲಾಡಿದ
ಮರುಳು ಸಾಮ್ರಾಟರು.
ಸಾಮ್ರಾಜ್ಯಶಾಹಿಗಳಿಗೊಂದು ಸವಾಲಾಗಿ
ಬದುಕಿದ್ದವಳು ನಮ್ಮ ಗೌರಿ
ಹೇಳು ಗುರುವೇ
ಗಜಮುಖನೇ ಬಲಿತೆಗೆದುಕೊಂಡನೇ?
ವೈಚಾರಿಕ ನೆಲೆಗಟ್ಟು ಅಲ್ಲಾಡಿಸುವ
ಧ್ಯೇಯ ಮಹಾವಾಕ್ಯ
ನೆನಪಾಗುತ್ತಿದೆ ಇಂದು ನನಗೆ
ಓ ಸದ್ಗುರುವೇ
ಇಂದೇ ದೀಕ್ಷೆ ನೀಡು ನನಗೆ ,
ಪಾತಕಿಗಳನ್ನು ಕೊಲ್ಲಲೇ?
ವೈಚಾರಿಕ ಕ್ರಾಂತಿ ಎಬ್ಬಿಸಲೇ?
ಅಹಂ ಬ್ರಹ್ಮಾಸ್ಮಿ ಜಪಿಸುತ್ತಲಿರಲೇ?
ಹೇಳು ಓ ಸದ್ಗುರುವೆ ನೀನೊಬ್ಬನೇ
ವೈಚಾರಿಕ ಪುರುಷೋತ್ತಮ.
--- ಸುರೇಶ ಜಕಾತಿ
06/08/2017
. ದೂರವಾಣಿ: 8746086658
- ಸುರೇಶ ಜಕಾತಿ.ಜಮಖಂಡಿ
06 Sep 2017, 10:24 pm
Download App from Playstore: