ನೀರಿನ ... ಮಹತ್ವ!

ಯಾದ್ದದಿಂದ ದಣಿದು ತನ್ನೂರಿನೆಡೆಗೆ
ಮರಳುವಾಗ.... ಮರಳುಗಾಡಿನ ನಡುವೆ
ನೀರಿಲ್ಲದ ಕ್ಷಣದಲ್ಲಿ ಹನಿ ನೀರಿಗೂ
ಹಾತೊರೆದಿದ್ದ..... ವಿಶ್ವಗೆದ್ದ ಅಲೆಗ್ಸಾಂಡರ್

ದಣಿವು ಬಯರಿಕೆಗಳಿಂದ ಬಳಲಿ
ಸಾಯುವ ಸ್ಥಿತಿಗೆ ಬಂದು ತಲುಪಿದಾಗ
ಗಂಗಳದಿಂದ ತುತ್ತು ಬಾಯಿಗೆ ಬಂದಹಾಗೆ
ದಾರಿಹೋಕನ ಬಳಿ ನೀರು ಕಾಣಿಸಿತ್ತು

ವಿಶ್ವಗೆದ್ದ ಅಲೆಗ್ಸಾಂಡರ್ ನೀರಿಗಾಗಿ ಬೇಡಿದ್ದ
ಒಂದು ಸಾವಿರ ವರಹನೀಡುವೆ...
ನೀರಿವೆಂದು.. ದರಿಹೋಕನಿಂದ ಬಂದ ಒಂದೇ ಒಂದು ಪ್ರಶ್ನೆ. ಇಷ್ಟೇನಾ. ನೀರಿನ ಬೆಲೆ?

ನಾ ಗೆದ್ದ ಹತ್ತು ಪ್ರಾಂತ್ಯ ನಿನಗೆ ನೀಡುವೆ
ನೀರಿವೆಂದ.. ಅವನಿಂದ ಮತ್ತೆ ಅದೇ
ಪ್ರಶ್ನೆ ಇಷ್ಟೇನಾ ನೀರಿನ ಬೆಲೆ?
ನಾ ಗೆದ್ದ ಅರ್ಧ ಭಾಗವನ್ನು ನೀನಾಗಾಗಿ
ನೀಡುವೆ ನೀರಿವೆಂದ..ಅಲೆಗ್ಸಾಂಡರ್

ದಾರಿಹೋಕನೇಳಿದ ನಿನ್ನ ಗೆದ್ದ ಎಲ್ಲಾ
ಸಾಮ್ರಾಜ್ಯವನ್ನ ನನಗೆ ನೀಡು
ನೀರಿವೆನೆಂದ......! ಅಲೆಗ್ಸಾಂಡರ್
ಒಪ್ಪಿಕೊಳ್ಳಬೇಕಾಯಿತು......ವಿಧಿ ಇಲ್ಲದೆ


ಅಯ್ಯ......... ರಾಜ ನೀ ಗೆದ್ದ ಇಡೀ
ವಿಶ್ವ ............ ಒಂದು ಗುಟುಕು ನೀರಿಗೆ ಸಮ
ವಾದರೆ ನಿ ಗೆದ್ದದೆಲ್ಲ ಏನಕ್ಕೆ ಬಂತು
ಅಗತ್ಯವಾದನ್ನ ಬಿಟ್ಟು ಅಗತ್ಯವಿಲ್ಲದಕ್ಕೇಕೆ
ಇಷ್ಟು ಪರಿಶ್ರಮ..............
ಇದ ತಿಳಿಸಲೆಂದೇ ನಾ ಹಾಗೆ ಮಾಡಿದೆನೆಂದ......

"ನೀರನ್ನ ಉಳಿಸಿ ಮುಂದಿನ ಪೀಳಿಗೆಗೆ ಸಹಕರಿಸಿ"




....... ಮಂಜು

- ಮಂಜು

12 Sep 2017, 07:21 pm
Download App from Playstore: