ಮನುಜನ ದುರಾಸೆ

*ಮನುಜನ ದುರಾಸೆ*
ಧರೆಯೊಡಲು ಬೆಂಕಿ ಉಗುಳುವಂತೆ
ಮಾಡುವಿಯಲ್ಲ ಕಟುಕ ಮನುಜನೆ
ಆಸೆಯೆಂಬ ಕುದುರೆಗೆ ಲಗಾಮಿಲ್ಲಾ
ದುರಾಸೆಯ ಓಟಕೆ ಬಲಿಯಾಗುವೆಯಲ್ಲ

ಎಷ್ಟು ಸಾರಿ ಕ್ಷಮಿಸಬೇಕು ನಿನ್ನ
ಸಹನೆಯ ಕೆರಳಿಸಬೇಡ ನನ್ನ
ನಡುಕ ಹುಟ್ಟಿ ಹೆದರಿಸಿ ಮನುಜನನ್ನ
ಭೂಕಂಪನ ಮಾಡಿಸುವೆ ಕೆರಳಿಸಿ ನನ್ನ

ಪರಿಸರ ಹಾಳು ಮಾಡುತಿರುವೆ
ನಗರೀಕರಣದ ನೆಪವ ಹೂಡಿ
ಗಿಡಗಳ ಮಾರಣ ಹೋಮ ನಡೆಸುತಿರುವೆ
ಮನ್ನಿಸೆನು ಎಂದಿಗೂ ಕ್ಷಮೆಯ ನೀಡಿ

ಪವಿತ್ರ ನೀರನ್ನು ಕಲುಷಿತ ಮಾಡುತಿರುವೆ
ಕಾರ್ಖಾನೆಗಳ ಕೊಳಕುನೀರ ಕಡಲಿಗೆ ಬಿಡುತಿರುವೆ
ಮುಂದೊಂದು‌ ದಿನ ನೀರಿಗಾಗಿ ಪರಿತಪಿಸಬೇಕಾದೀತು
ಪಶ್ಚಾತ್ತಾಪ ಪಡಬೇಕಾದೀತು ಎಚ್ಚರ ಮನುಜನೆ

ಪದೆಪದೆ ತಪ್ಪನು ಮಾಡದಿರು ಎಂದಿಗೂ
ಪ್ರಕೃತಿ ನಾಶಗೊಳಿಸದಿರು ಎಂದೆಂದಿಗೂ
ನಿನ್ನಿಂದ ನೀನೆ ಆಗುತಿರುವೆ ದುರುಳ
ಕೊನೆಗೆ ಏನು ಉಳಿಯದು ಮರುಳ
ಅಸ್ಥಿ ಪಂಜರವಾಗಿ ಮಣ್ಣಲಿ ಮಣ್ಣಾಗುವೆ

*ಶಿವಕುಮಾರ ಕರನಂದಿ*

- shivakumar k

19 Sep 2017, 11:13 am
Download App from Playstore: