ಅಂದು-ಇಂದು....
ಕೊಳೆತು ನಾರಿದ ಸಮಾಜವ
ಬದಲಿಸುವ ಬಯಕೆ ಅಂದು
ಕೊಳೆತ ಕೆಸರಲೆ ಹೊರಳಾಡುವ
ಸಾಮರಸ್ಯದ ಜೀವನ ಇಂದು
ಸೋಲೆ ಇಲ್ಲದ ಸರದಾರಳು
ನಾನೆಂಬ ಅಹಂ ಅಂದು
ಸೋಲಿನ ಸರಮಾಲೆಯ ದರಿಸಿದವಳು
ಸಂದರ್ಭದ ಕೈಗೊಂಬೆ ನಾನಿಂದು
ದೂರದ ಶಿಖರವ ಮುಟ್ಟಲು
ಕ್ಷಣಿಕ ಸುಖವ ತ್ಯಜಿಸಿದೆನಂದು
ನಿಖಟ ಗಿರಿಯ ಮುಟ್ಟಲಾಗದೆ
ಪರಿತಪಿಸುತಿರುವೆನು ಇಂದು
ಶಾರಧ
- ಶಕುಂತಲಾ
23 Sep 2017, 11:15 pm
Download App from Playstore: