ಗೆಳೆಯ
ಗೆಳೆಯನೊಬ್ಬನ ಒಡಲೊಳಗಿನ
ಹಸಿ ಹಸಿ ನೋವು
ಕವಿತೆಯಾಗಿ ಬರುತ್ತದೆ;
ಓದಿದವರು ಭಲೇ ಭಲೇ
ಅಂತ ಬೆನ್ನು ತಟ್ಟುತ್ತಿದ್ದಾರೆ..
೨)
ನನಗ್ಯಾರೂ ಇಲ್ಲವೆಂದು
ಆಕಾಶದೆಡೆಗೆ ದೃಷ್ಟಿಯಿಟ್ಟೆ
ಅಗಣಿತ ತಾರೆಗಳು ಕೈಬೀಸಿದವು.
ಅಪ್ಪ ನೆನಪಾದ,
ಅಪ್ಪ ಅಂದರೆ ಆಕಾಶ..
೩)
ಕವಿತೆಯನ್ನು ಮಾರಿಕೊಂಡವನು
ಮತ್ತಷ್ಟು ಬಡವನಾದ,
ಹಂಚಿಕೊಂಡವನು
ಮತ್ತಷ್ಟು ಶ್ರೀಮಂತ !
೪)
ಬತ್ತಿ ಸುಟ್ಟು ಹೋಯಿತು
ಎಣ್ಣೆಯೂ ಕರಗಿತು
ಹರಡಿದ್ದ ಬೆಳಕು ಮಾತ್ರ
ಸತ್ಯ..
ಸಂಗ್ರಹ (ವಾಸು)
- ವಾಸು ಕೋಲಾರ
04 Oct 2017, 07:35 pm
Download App from Playstore: