ರೌದ್ರಾವತಾರ
ವ್ರತಪೂಜಾದಿಗಳ ಫಲವಾಗಿ
ನೊಂದ ಮನಗಳಿಗೆ ವರವಾಗಿ
ಬರಗಾಲ ದೂರ ಮಾಡಿ
ಹರಿಯುತಿಹೆ ಮಾಡುತ ಮೋಡಿ
ನರ್ತನೆಯ ಮಾಡುತಿಹವು
ಹಳ್ಳ-ಕೊಳ್ಳ ನದಿಗಳು
ನಿನ್ನ ಸೆಳೆತಕ್ಕೆ ಕೊಚ್ಚಿಹೋಗಿಹವು
ಮನೆ-ಮಠ ಜೀವಗಳು
ದಶಕಗಳಿಂದ ಬರಿದಾಗಿದ್ದ
ನದಿಗಳಿಗೆ ಪುನರ್ಜನ್ಮ ನೀಡಿಹೆ
ಕೆರೆಗಳ ಕಟ್ಟೆ ಹೊಡೆದು
ಜೀವ ಹಾನಿಗಳ ಮಾಡಿಹೆ
ನೀ ಧರೆಯ ತಾಗೆಂದು
ಮೊರೆಯಿಟ್ಟವರು ನಾವೆ ಅಂದು
ನಿನ್ನ ರೌದ್ರಾವತಾರವ ನಿಲ್ಲಿಸೆಂದು
ಅಂಗಲಾಚುತಿರುವೆವು ಇಂದು
ಶಾರಧ
- ಶಕುಂತಲಾ
12 Oct 2017, 10:19 pm
Download App from Playstore: