ನಾನು.............
ಯೋಧನ ಗುಂಡಿಗೆಯಲ್ಲಿ ಕುಂತು ನಾನು
ದೇಶ ಕಾಯುವೆನು ..... ನಾನು
ದೇಶದ ಒಳಿತಿಗಾಗಿ ಪ್ರಾಣವನ್ನು
ಅರ್ಪಿಸುವೆನು ನಾನು
ತಾಯಿಯ ಮನದಲ್ಲಿ ನಿಂತು ನಾನು
ಪ್ರೀತಿಯನು ದಾರೆಯೆರೆಯುವೆನು. ನಾನು
ಕೊನೆಯವರೆವಿಗೂ ಬೆರೆಯವರಿಗಾಗಿ
ಬಾಳುವೆನು. ನಾನು
ರೈತನ ಬೆವರಿನಲ್ಲೂ ನಾನು
ನೇಗಿಲ ಬದಿ ನಿಂತು ಉಳುವೆನು ನಾನು
ಭೂಮಿಯಲ್ಲಿ ಫಲ ತೆಗೆಯಲು
ಅನ್ಯರ ಹಸಿವಿಗಾಗಿ ನಾನು
ಕಾರ್ಮಿಕರ ಭುಜ ಬಲದಲ್ಲೂ ನಾನು
ಹಗಲು ಇರುಳು ದುಡಿವೆನು ನಾನು
ದೇಶದ ಆರ್ಥಿಕತೆಯ ಉದ್ಧಾರಕ್ಕಾಗಿ
ಏಳಿಗೆಗಾಗಿ............. ನಾನು
ಕವಿಗಳ ಕನಸುಗಳಲ್ಲಿಯೂ ನಾನು
ಕನಸುಗಳನ್ನ ಕವಿತೆಗಳಾಗಿ ರೂಪಿಸಲು ನಾನು
ಸಾಹಿತ್ಯದ ಬೆಳವಣಿಗಾಗಿ
ಶ್ರಮಿಸುವೆನು ......... ನಾನು
ಸಮಾಜ ಕಂಟಕರಲ್ಲೂ ನಾನಿರುವೆನು
ಪ್ರಪಂಚದಲ್ಲಿಅಶಾಂತಿ ಉಂಟುಮಾಡುವ ನಾನು
ಕೊನೆಗೆ ಬಲಿಯಾಗುವೇನು........ನೀನು
ಎಂಬುವ ವೀರನಿಂದ ನಾನು
ನೀವು ಬಳಸಿಕೊಂಡಂತೆ ...............ನಾನು
------- ಮಂಜು
- ಮಂಜು
15 Oct 2017, 06:16 pm
Download App from Playstore: