..

ಎಲ್ಲಕ್ಕೂ ಉಂಟು
ಇಲ್ಲಿ ಮೀಸಲಾತಿ
ಸತ್ತಮೇಲೆ ಸ್ವರ್ಗದಲ್ಲೂ
ದುಡ್ಡು ಕೊಟ್ಟರೆ
ಪಾಪಿಗಳಿಗು ಸಿಗಬಹುದೇ
ಪುಣ್ಯದ ವಿನಾಯಿತಿ

ಕೊನೆಗೂ ಶುರುವಾಯಿತು
ಬಿಗ್ಗ್ಬಾಸ್ ಸೀಸನ್ ಫೈವ್
17 ಕೋತಿಗಳ ಮಂಗಾಟ
ಅದ ನೋಡಲು
ಮನೆಯಲಿ ರಿಮೋಟ್ ಗಾಗಿ
ಬುದ್ದಿಜೀವಿಗಳ ಕಿತ್ತಾಟ



ಪ್ರಪಾತಕ್ಕೆ ಬಿದ್ದರು ಸಾಯಲಿಲ್ಲ
ಹಾವು ಕಡಿಯಲಿಲ್ಲ
ಹುಲಿಯು ತಿನ್ನಲ್ಲಿಲ್ಲ
ದೈವ ಮಾನವಳೇ
ನಮ್ಮ ಪುಟ್ಟಗೌರಿ
ಡೈರೆಕ್ಟರ್ರೇ ಸ್ವಲ್ಪ ಉತ್ತರ ಹೇಳಿ

ಕತ್ತಲು ನೀಗಿಸಿ
ಬದುಕನು ಬೆಳಗಿಸಿ
ಆಚರಿಸೋಣ ಈ ದೀಪಾವಳಿ
ಪಟಾಕಿಯೇ ಬೇಕೇ
ನಿಸರ್ಗವ ಕೆಡಿಸಿ
ಆಚರಿಸಲು ಬೆಳಕಿನ ರಂಗೋಲಿ ..



ಹುಟ್ಟಿಗೊಂದು ಜಾತಿ
ಗುಂಪಿಗೊಂದು ಪಾರ್ಟಿ
ನೋಟಿಗೊಂದು ಓಟು
ಇರುವವರೆಗೆ ಮೋದಿ ಅಲ್ಲ
ದೇವರೇ ಬಂದರು ಕೂಡ
ದೇಶವಾಗದು ಅಭಿವೃದ್ಧಿ

ಒಳ್ಳೆಯವರಾರು ಕೆಟ್ಟವರಾರು
ಯೋಚಿಸಲು ಸಮಯವಿಲ್ಲ
ನೋಟು ಕೊಡಿ ಓಟು ತಗೊಳ್ಳಿ
ನೀವು ಸತ್ತರೆಷ್ಟು ಇದ್ದರೆಷ್ಟು
ಇನ್ನು ಐದು ವರ್ಷ
ತೆಪ್ಪಗೆ ಇರೋದ್ ಕಲ್ತ್ಕೊಳ್ಳಿ..



ಸೀರೆ ತೊಟ್ಟ ಪ್ರತಿಬಾರಿಯೂ
ನನ್ನವಳದೊಂದು ಪ್ರಶ್ನೆ
ರೀ ನಾ ಹೇಗೆ ಕಾಣುವೆನೆಂದು ..
ಅಯ್ಯೋ ನಿನಗೇನು ಚಿನ್ನ
ಅಮವ್ಯಾಸೆಯ ಚಂದ್ರನ ಬಣ್ಣ
ಇನ್ನೆಗೆ ಹೇಳಲಿ ಅವಳ ಅಂದವನ್ನ..
ಗಾದೆಪ್ಪ

- ಗಾದೆಪ್ಪ

20 Oct 2017, 07:25 pm
Download App from Playstore: