ಮನ ಮೆಚ್ಚಿದ ಮಹಾತ್ಮಾ

ಕಣ್ಮುಂದೆ ಕಾಣುವುದು ಕೋಟಿತಾರೆಗಳಾದರೆ
ಕಣ್ಮರೆಯಲ್ಲಿ ಈ ಚಂದನಿಗೆ ಬೆಳಕನೀಡುವುದು
ಮುಕ್ಕೋಟಿ ಚುಕ್ಕಿಗಳು ಹೆಸರೇ ತಿಳಿಯದ ಅಕಾಶಕಾಯಗಳು.

ಸ್ವಾತಂತ್ರ್ಯ ಹೋರಾಟದಲ್ಲಿ ಮುಂದೆ ನಿಂತು ನಾಲ್ಕುಜನರ ಕಂಗಳಲ್ಲಿ ಉತ್ತೇಜ ತುಂಬಿದ ವಿರಾಧಿ ವೀರರು ನೂರಾರು ಮಂದಿ
ಹಿಂದೆ ನಿಂತು ಪ್ರಾಣತೆತ್ತು ನಾಯಕನ ಕಾಲಿಗೆ ಮಣ್ಣು ಅಂಟದಂತೆ ನೋಡಿಕೊಂಡವರು ಹಲವರು.

ಇದ್ದನೋರ್ವ ಮಹಾತ್ಮ ಕಾಣಲಿಲ್ಲ ಯಾರಿಗಿಂದು ಅವನ ಜೀವನ ಶೈಲಿಯ ಯತಾರ್ಥ ಹೆಸರಾದರೂ ತಿಳಿಯದಾದರು ಒಮ್ಮೆಯಾದರೂ ನೆನೆಯದಾದರು ಅಂದು ಅವರಿಂದ ಜೀವಪಡೆದ ದಲಿತವರ್ಗದ ಅಚಲಿತ ಜನಾಂಗದವರು.

ಕುದ್ಮಲ್ ರಾಂಗಾರಾವ್ ನಾಮದೆಯ ಮುನ್ನಡಿದ ಮನುಗಣಕ್ಕೆ ಇಂದಾದರು ಇವರ ಪರಿಚಯ ಆಗಿದೆಯಾ!!
ಹಿಂದುಳಿದ ವರ್ಗದ ಪದದೂಳಿ ಹಣೆಗೆ ತಾಗದೇನೆ ಕೊನೆಯುಸಿರೆಳೆದರು ನಮ್ಮ ಮಹಾತ್ಮರ ಗುರು ಕಂಡ ಕನಸು ಹೊತ್ತ ಆಸೆ ಕಣ್ಣಾರೆ ಕಾಣದೇನೆ.

ಮಿಂಚಿ ಮರೆಯಾದ ತಾರೆಯೊಂದು ಚರಿತ್ರೆಯ ಪುಟದಲ್ಲಿ ಅಡಗಿದೆ ಕಾಣಿರಿ ನಾಯನದಿಂದಲ್ಲ ಮನಸ್ಸಿನಿಂದ ಮನುಷ್ಯನಾಗಿ.

- ಚುಕ್ಕಿ

25 Oct 2017, 12:04 am
Download App from Playstore: