ರಾಜ್ಯೋತ್ಸವ
ವಜ್ರಮಹೋತ್ಸವದ ಸಡಗರದಲಿ
ಜನ್ಮದಿನದ ಸವಿನೆನಪಲಿ,ನಿನ್ನ
ಮೆರೆಸುತಿಹರು ನಿನ್ನ ಮಕ್ಕಳು
ಮದದೊಳಗಿನ ಮುದದಲಿ!
ನಿನ್ನಲ್ಲಿನ ಕೊರತೆಯ ಮರೆತು
ರಂಜನೆಯಲಿ ಮೈಮರೆತು
ಮತದಾರನ ತಲೆಸವರಿ
ಕೂರುವರು ಅಶಾಶ್ವತದ ಕುರ್ಚಿಯೇರಿ!
ಬಹುದಿನಗಳು ಪರಿತಪಿಸಿ
ಬಹು ಪ್ರಯಾಸದಿ,ಹಲವರು
ನಿನ್ನ ಕರುಳಕುಡಿಗಳ ಒಗ್ಗೂಡಿಸಿ
ಸ್ವತಂತ್ರ ನಾಡೆಂದು ಘೋಷಿಸಿದರು!
ಸಾಗಿಬಂದ ಸನ್ಮಾರ್ಗವ ಮರೆತಿಹರು
ಆರ್ಜನೆಯ ಮಾರ್ಗವ ಅರಸುತಿಹರು
ಆಪಾದಕರೆ ನಮ್ಮನಾಳುತಿಹರು
ಸಾಚಾತನವ ಎಲ್ಲಿ ಕಾಣುವರು!
ಶಾರಧ
- ಶಕುಂತಲಾ
01 Nov 2017, 09:39 pm
Download App from Playstore: