ತೃಪ್ತಿ
ತಿಳಿದಿಕೊ ನೀ ಹುಟ್ಟಿದ ಕಾರಣ,
ಬಾಗಿಲ ಬಳಿ ಬರುವ ಮುನ್ನವೇ ಮರಣ,
ಪರರ ಸುದ್ದಿಯಲಿ ಮಾಡಬೇಡ ಕಾಲಹರಣ,
ಎಲ್ಲರ ದಾರಿಯೇ ಬೇರೆ ಅದೊಂದು ತಿಳಿಯದ ಆವರಣ,
ನಿನ್ನ ದಾರಿಯಲಿ ಕಟ್ಟಬೇಡ ಆಸೆಯೆಂಬ ತೋರಣ,
ನೆನಪಿರಲಿ ಬಾಳಿನ ದಾರಿಯಲಿ ತೃಪ್ತಿಯೇ ತಂಗುದಾಣ,
ಮಂಕು ಮಾಡಿದೆ ನಿನ್ನ ಕನಸಲು ಬರುವ ಹಣ,
ದುಷ್ಟತನವ ನಾಟುವಳು ಮಾಯೇ ಕಾಂಚಾಣ,
ಮಾಡಿರುವ ಪಾಪವ ತೊಳೆಯಲು ಹೆದರುವಳು ಗೀರ್ವಾಣ,
ಎಷ್ಟೇ ಹೆಸರಿದ್ದರೂ ಅಹಂ ನೀಗಿಸಿ ಬಾಳು ನೀನಿಲ್ಲೀ ಸಾಧಾರಣ
- Vadiraj Sarvothama
10 Nov 2017, 12:36 am
Download App from Playstore: