ಅಂಧ ಸತ್ಯ

ಕಾಣದೊಂದು ಹೊಸ್ತಿಲಲ್ಲಿ
ಅಂಧ ಸತ್ಯ ಕಣ್ಮುಚ್ಚಿ ಕುಳಿತಿದೆ
ಯಾರು ಕರೆದರೂ ತಿರುಗದು
ಯಾರು ಜಡಿದರೂ ಮರುಗದು
ದೀನ ದಲಿತರ ಪಾಲಿಗೆ
ದುಃಖದ ಕಲೆಯೆಂದು ಮಾಸದು
ನ್ಯಾಯದ ತಕ್ಕಡಿಯೆಂದು ತೂಗದು
ಸತ್ಯದ ಬಾಗಿಲೆಂದು ತೆರೆಯದು
ನ್ಯಾಯ ದೇವತೆ ಕಣ್ಮುಚ್ಚಿ ಕುಳಿತಿದ್ದರೇ
ಹಾಲು ನೀರು ಒಂದೇ ಎಂದು ಸಾರಿಬಿಡುತ್ತಾರೆ
ನೊಂದು ಬೆಂದವರ ಬದುಕಿನಲ್ಲಿ ನ್ಯಾಯವೆಂಬ
ಹಕ್ಕಿಯನ್ನು ಒಂದೇ ದಿಕ್ಕಿಗೆ ಹಾರಿಸಿ ಬಿಡುತ್ತಾರೆ
ಮಸಣಕ್ಕದೇ ದಾರಿ ಎಂದು ತೋರಿ ನಲಿಯುತ್ತಾರೆ.

................ಸಹೃದಯಿ.............ಸಿಂಚನ.............

- ಡಿ.ಸಿ.ಎನ್@100%

13 Nov 2017, 07:55 pm
Download App from Playstore: