ಫಲ
ಶಿರವ ಧರೆಗೆ ತಾಗಿಸಿ ಮಲಗಿದರೆ
ಕಾಣುವುದು ನೀಲಾಂಬರವು ಕಣ್ಣೆದುರೆ
ಉಣ್ಣಲು ಅನ್ನವಿಲ್ಲ,ಉಡಲು ಬಟ್ಟೆಯಿಲ್ಲ
ಮಿದು ಬೆಳಕಲಿ,ಮಧುಭರಿತ ಸ್ವಪ್ನವಿದೆ
ಸಾಧಿಸಲು ಮನ್ನುಗ್ಗಿದರೆ ಫಲವಿದೆ!
ಕಡಲೊಂದು ದುರ್ಗಮ ಹಾದಿಯ
ಸುಗಮವಾಗಿಸಿ ಸಾಗಬಲ್ಲುದು
ಕಾನನದ ಕುಸುಮವೊಂದು
ದೈವ ಪೂಜೆಯಲ್ಲಿ ಎಡೆ- ಪಡೆಯಬಲ್ಲುದು
ಅಲಕ್ಷಿಸಲ್ಪಟ್ಟವರೆ ಎಲ್ಲರ ಲಕ್ಷ್ಯಸೆಳೆಯಬಲ್ಲರು!
ಹಕ್ಕಿಯೊಂದು ಧೃತಿಗೆಟ್ಟರೆ
ಹಾರಬಲ್ಲದೆ ಆಗಸದೆತ್ತರ
ಎದುರಾದ ಎಡರು- ತೊಡರಿಗೆ
ಬಲಿಯಾದರೆ ಸಾಗೀತೇ
ಸಾಧನೆಯ ಬಹುದೂರದಾದಿ!
ಶಾರಧ
- ಶಕುಂತಲಾ
22 Nov 2017, 05:13 pm
Download App from Playstore: