ವಿಚಾರದಾರೆ

ನಡೆವ ,ನುಡಿವ ದಾರಿಯಲ್ಲಿ
ಕಷ್ಟ ಇರಲಿ ನಿತ್ಯ ನೂರು
ಒಳಿತೆ ಜೀವನದ ಚೈತನ್ಯವಾಗಿ
ಬೆಳಕು ಬಾಳ ಬೆಳಗಲಿ

ಅಂತರಂಗದಂತರವನು
ಸರಿಸಿ ಒಂದುಗೂಡಲಿ
ಮನುಜ ಕುಲದ ಏಳ್ಗೆಯೊಂದೇ
ಧ್ಯೇಯ ಘೋಷಣೆಯಾಗಲಿ

ಎದೆಯ ಬಲವ ಮೆರೆಸುವಲ್ಲಿ
ಧೈರ್ಯ ಶಕ್ತಿ ಹೆಚ್ಚಲಿ
ಭಕ್ತಿ ಭಾವ ಕರುಣೆಯಿಂದ
ವಿಚಾರಧಾರೆ ಹರಿಯಲಿ

- ನಾಗರಾಜ್

24 Nov 2017, 09:04 pm
Download App from Playstore: