ಹೆಸರೋಳೆಯದ ಕವಿತೆ

ರೈತನತ್ರ ಮಳೆ-ಬೆಳೆ-ಕಳೆಯ ಚಿಂತೆ..
ರಾಜಕರಣಿಗಳತ್ರ ಓಟು-ನೋಟಿನ ಕಂತೆ..
ಅಧಿಕಾರಿಗಳತ್ರ ದರ್ಪ-ದೌಲತ್ತಿನ ಸಂತೆ
ಪ್ರೇಮಿಗೆ ಒತ್ತು-ಮುತ್ತಿನ ಬ್ರಾಂತಿ ಅಂತೆ...

ಕವಿಗೆ ಪದ-ಪುಂಜದ ಇರಾದೆ..
ಕಾರ್ಮಿಕನಿಗೆ ಮೈ-ಕೈ ನೋವಿನ ಪುರದೆ.
ಹಗಳುಗಳ್ಳನಿಗೀವತ್ತು ಎಲ್ಲಿ-ಇಲ್ಲದ ಮರ್ಯಾದೆ..
ಸೇರುಗು ಬಿಚ್ಚಿವ್ವಳೆ ಇವತ್ತು ರತಿ-ಮತೀಯ ರಾಧೆ...

ಮುದಕನಿಗೆ ಮಕ್ಕಳು-ಮೊಮ್ಮಕ್ಕಳ ಬ್ರಾಂತಿ..
ರೋಗಿಗೆ ಕೆಮ್ಮು-ಧಮ್ಮಿನ ಶೀತದ ವಾಂತಿ..
ಚೆಂದುಳ್ಳಿ ಚೆಲುವೆಗೆ ಮಾಟ-ನೋಟವೇ ಕಾಂತಿ..
ಕೊಲೆಗಡುಕನಿಗೆ ಜಗಳ-ತೆಗಳವೆ ಅವನಿಗೆ ಕ್ರಾಂತಿ..
ಸುಗ್ಗಿ...

- ಆರ್ ಎಸ್ ಸುಗ್ಗಿ.

28 Nov 2017, 08:26 pm
Download App from Playstore: