ಅಸಲಿ ಮಾತು
ಚಿಗುರು ಗಿಡವಾಗಿ ಬೆಳೆವಾಗ
ಯಾರು ಹೊಯ್ದಿಲ್ಲ ನಾಲ್ಕು ಹನಿ ನೀರು
ಆದರೂ ಮರವಾದೆ ಸ್ರಷ್ಟಿ ಔದಾರ್ಯ
ರಸ್ತೆ ಬದಿಯಲ್ಲಿ ನಿಂತು
ದಾರಿ ಹೋಕರಿಗೆ ನೆರಳೀಯುತ್ತಿದ್ದೇನೆಂಬ
ಹಮ್ಮುತನವಾಗಲಿ
ಹತ್ತಾರು ಪಕ್ಸಿಗಳು ನನ್ನಲ್ಲಿ
ಗೂಡುಕಟ್ಟಿ ಬದುಕುತ್ತಿವೇ ಎಂಬ
ಹೆಗ್ಗಳಿಕೆಯಾಗಲಿ ನನಗಿಲ್ಲ
ಇಷ್ಟಾದರೂ ಕಲ್ಪಿಸಿದ ದೈವದೊಲುಮೆ ಬಗೆಗೆ
ಧನ್ಯತಾ ಭಾವ
ಸ್ವಾರ್ಥ ಪರರು ನನ್ನ ಬುಡಕ್ಕೆ
ಕೊಡಲಿ ಇಟ್ಟಾಗ ಕಂಪಿಸಿದ್ದು
ಸಾಯುತ್ತೇನೆಂಬ ಭಯದಿಂದಲ್ಲ
ನನ್ನ ಆಶ್ರಿತರೆಲ್ಲ ಇನ್ನೊಬ್ಬರನ್ನು
ತಬ್ಬಬೇಕಲ್ಲ ಎಂಬ ನೋವಿನಿಂದ.
- ಯು.ರಾಮು ಸಿರಿಗೆರೆ
30 Nov 2017, 09:30 pm
Download App from Playstore: